
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜೂನ್ 15ರಂದು ಬೆಳಗಾವಿಯ ರಾಣಿ ಚೆನ್ನಮ್ಮ ನಗರದಲ್ಲಿ ಇರುವ ಶ್ರೀ ಸತ್ಯ ಪ್ರಮೋದ ಸಭಾಗೃಹದಲ್ಲಿ ತ್ರಿ ಮತಸ್ತ ಬ್ರಾಹ್ಮಣರ ವಧು-ವರ ಸಮಾವೇಶವನ್ನು ಶ್ರೀ ಸಪ್ತಗಿರಿ ಸೇವಾ ಪ್ರತಿಷ್ಠಾನ ಬೆಳಗಾವಿ ಮತ್ತು ವಿಶ್ವ ಮಧ್ವ ಮಹಾ ಪರಿಷತ್ ಬೆಳಗಾವಿ ವತಿಯಿಂದ ಆಯೋಜಿಸಲಾಗಿದೆ.
ಈ ಎರಡು ಸಂಘಟನೆಗಳು ಸಮಾಜದ ಎಲ್ಲ ಬಾಂಧವರಿಗೆ ಅನುಕೂಲ ಆಗಲೆಂದು ಮಾಡಿರುವ ವೇದಿಕೆ. ತಮಗೆಲ್ಲರಿಗೂ ತಿಳಿದಂತೆ ವಿವಾಹವು ಹಿಂದೂ ಕುಟುಂಬ ವ್ಯವಸ್ಥೆಯ ಮೌಲ್ಯಧಾರಿತವೆಂದು ಪರಿಗಣಿಸಲಾಗಿದೆ. ಈ ವ್ಯವಸ್ಥೆಯನ್ನು ಬಳಪಡಿಸಲು ಮತ್ತು ಆರೋಗ್ಯಕರ ಸಮಾಜವನ್ನು ನಿರ್ಮಿಸಲು ಸದಾ ಈ ಸಂಸ್ಥೆಗಳು ಮುಂಚೂಣಿಯಲ್ಲಿ ಇರುತ್ತವೆ.
ಈಗಾಗಲೇ ಈ ಕಾರ್ಯಕ್ರಮವನ್ನು ಕಳೆದ ಬಾರಿ ಇವೆ ಸಂಘಟನೆಗಳು ಆಯೋಜಿಸಿದಾಗ ಸುಮಾರು 300 ವಧು ಹಾಗೂ 450 ವರಗಳ ಹೆಸರುಗಳನ್ನೂ ನೋಂದಾಯಿಸಲಾಗಿತ್ತು ಮತ್ತು ಅದರಲ್ಲಿ ಸುಮಾರು 25 ಮದುವೆಗಳು ಯಶಸ್ವಿಯಾಗಿ ನಡೆದಿವೆ ಹಾಗಾಗಿ ಈ ಬಾರಿಯು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ವಧು ವರರು ಒಟ್ಟಾಗಿ ಸೇರಿ ಜೀವಮಾನದ ವೈವಾಹಿಕ ಬಂಧನವನ್ನು ಸ್ಥಾಪೀಸುವ ಕಡೆಗೆ ಈ ವೇದಿಕೆ ಮುಖಾಂತರ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ರಾಘವೇಂದ್ರ ಕಟ್ಟಿ 7353351159
ಶ್ರೀಧರ ಹಲಗತ್ತಿ 7338233598
ಶ್ರೀದೇವಿ ಕುಲಕರ್ಣಿ 9480677976
ಜ್ಯೋತಿ ಶೆಳ್ಳಿಕೇರಿ 9845249632