Latest

ಆರ್ಥಿಕತೆ ಬೆಳವಣಿಗೆಗೆ ಪೂರಕ ಬಜೆಟ್ ಮಂಡಿಸುವ ನಿರೀಕ್ಷೆ; ಸಿಎಂ ಬೊಮ್ಮಾಯಿ ವಿಶ್ವಾಸ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಳೆದ ಮೂರು ವರ್ಷಗಳಿಂದ ಕೋವಿಡ್ ಸಂಕಷ್ಟದ ನಡುವೆಯೂ ನಮ್ಮ ಆರ್ಥಿಕತೆ ಚೇತರಿಕೆಯಾಗುತ್ತಿದೆ. ಆರ್ಥಿಕತೆ ಇನ್ನಷ್ಟು ಬೆಳವಣಿಗೆಯಾಗುವಂತಹ ಪೂರಕ ಬಜೆಟ್ ನ್ನು ವಿತ್ತ ಸಚಿವರು ಮಂಡಿಸುವ ವಿಶ್ವಾಸವಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಕೇಂದ್ರ ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಆರ್ಥಿಕತೆಗೆ ಪೂರಕವಾಗುವಂತಹ ಬಜೆಟ್ ಮಂಡಿಸುತ್ತಾರೆ. ಉದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ಒತ್ತು ನೀಡುವ ಸಾಧ್ಯತೆ ಇದೆ. ಜನಕಲ್ಯಾಣ ಯೋಜನೆಗಳನ್ನು ಜಾರಿ ಮಾಡುವ ನಿರೀಕ್ಷೆ ಇದೆ. ಒಟ್ಟಾರೆ ಒಂದು ಉತ್ತಮ, ಒಳ್ಳೆಯ ಮುನ್ಸೂಚನೆ ಬಜೆಟ್ ಇದಾಗಲಿದೆ ಎಂಬುದು ನನ್ನ ಅಭಿಪ್ರಾಯ ಎಂದರು.

Home add -Advt

ಕರ್ನಾಟಕಕ್ಕೆ ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಯೋಜನೆಗಳನ್ನು ಘೋಷಿಸುವ ನಿರೀಕ್ಷೆ ಇದೆ. ಇಂದು ವಿತ್ತ ಸಚಿವರು ಕೇವಲ ಬಜೆಟ್ ಭಾಷಣವಷ್ಟೇ ಮಾಡುತ್ತಾರೆ. ಇಲಾಖಾವಾರು ಪೂರ್ಣ ಮಾಹಿತಿ ಬರಲು ಎರಡು ದಿನ ಬೇಕಾಗುತ್ತದೆ. ಒಟ್ಟಾರೆ ಆರ್ಥಿಕತೆಗೆ ಪೂರಕವಾದ ಬಜೆಟ್ ಮಂಡಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಕೇಂದ್ರ ಬಜೆಟ್ ಮಂಡನೆಗೆ ರಾಷ್ಟ್ರಪತಿ ಒಪ್ಪಿಗೆ; ಕರ್ನಾಟಕದ ನಿರೀಕ್ಷೆಗಳೇನು?

Related Articles

Back to top button