Belagavi NewsBelgaum NewsKannada NewsKarnataka NewsNationalPolitics

*ಬಾರ್ ಅಸೋಸಿಯೇಷನ್ 150 ನೇ ವರ್ಷಾಚರಣೆ: ಕೇಂದ್ರ ಕಾನೂನು ಸಚಿವರಿಗೆ ಆಹ್ವಾನಿಸಿದ ಶೆಟ್ಟರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಬಾರ್ ಅಸೋಸಿಯೇಷನ್ 150 ನೇ ವರ್ಷಾಚರಣೆಗೆ ಕೇಂದ್ರ ಕಾನೂನು ಸಚಿವರನ್ನು ಸಂಸದ ಜಗದೀಶ ಶೆಟ್ಟರ್ ಅವರು ಆಹ್ವಾನಿಸಿದ್ದಾರೆ.

ಇಂದು ಕೇಂದ್ರ ಕಾನೂನು ಸಚಿವರಾದ ಅರ್ಜುನ ರಾಮ್ ಮೇಘವಾಲ ಇವರನ್ನು ಸಂಸದ ಭವನದ ಅವರ ಕಚೇರಿಯಲ್ಲಿ ಭೇಟಿ ಮಾಡಿ, ಬೆಳಗಾವಿ ಬಾರ್ ಅಸೋಸಿಯೇಷನ್ ತನ್ನ ಅಸ್ತಿತ್ವದ 150 ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನಲೆಯಲ್ಲಿ 150ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ಸಮಾರಂಭಕ್ಕೆ ಬೆಳಗಾವಿ ಬಾರ್ ಅಸೋಸಿಯೇಷನ್ ಅಧ್ಯಕ್ಷರ ಮನವಿಯಂತೆ “ಮುಖ್ಯ ಅತಿಥಿಗಳಾಗಿ” ಆಗಮಿಸುವ ಬಗ್ಗೆ ವಿನಂತಿಸಿದರು.

150ನೇ ವಾರ್ಷಿಕೋತ್ಸವ ಸಮಾರಂಭ ತಾತ್ಕಾಲಿಕವಾಗಿ ಅಕ್ಟೋಬರ  ರಂದು ಆಯೋಜಿಸಲಾಗಿದೆ. ರಾಜ್ಯಾದ್ಯಂತ ಸುಮಾರು 20 ಸಾವಿರಕ್ಕೂ ಅಧೀಕ ಸಂಖ್ಯೆಯಲ್ಲಿ ವಕೀಲರ ಸಮೂಹ ಇದರಲ್ಲಿ ಭಾಗವಹಿಸಲಿದ್ದು, ಅದರಂತೆ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಸಹ ಭಾಗವಹಿಸಲಿರುವ ನಿರೀಕ್ಷೆ ಇದೆ.

Home add -Advt

ಈ ಹಿನ್ನಲೆಯಲ್ಲಿ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವಂತೆ ಕೇಂದ್ರ ಕಾನೂನು ಸಚಿವರಲ್ಲಿ ಸಂಸದರಾದ  ಜಗದೀಶ ಶೆಟ್ಟರ್ ಅವರು ಮನವಿ ಮಾಡಿದ್ದಾರೆ.

ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಕಾನೂನು ಸಚಿವರು, ಪ್ರಸ್ತಾಪಿತ ಸಮಾರಂಭದಲ್ಲಿ ಭಾಗವಾಹಿಸುವುದರ ಬಗ್ಗೆ ಸ್ಪಷ್ಟ ಭರವಸೆಯನ್ನು ನೀಡಿದ್ದಾರೆ ಎಂದು ಬೆಳಗಾವಿ ಸಂಸದರಾದ ಜಗದೀಶ ಶೆಟ್ಟರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button