Belagavi NewsBelgaum NewsKannada NewsKarnataka NewsLatest

ವಿದ್ಯುತ್ ಶಾಕ್ ಗೆ ತರಕಾರಿ ವ್ಯಾಪಾರಿ ಸಾವು

ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ : ವಿದ್ಯುತ್ ಶಾಕ್ ನಿಂದಾಗಿ ತರಕಾರಿ ವ್ಯಾಪಾರಸ್ಥನೋರ್ವ ಸಾವಿಗೀಡಾಗಿದ್ದಾನೆ.

ಹುಕ್ಕೇರಿ ತಾಲೂಕಿನ ಸೋಲ್ಲಾಪುರದ ಮಾರುತಿ ಜ್ಯೋತೆಪ್ಪ ಗೊಲಬಾವಿ (32) ಮೃತ ಯುವಕ.

ನಿಪ್ಪಾಣಿಯ ಟಿಳಕ ಚೌಕದಲ್ಲಿ ಗುರುವಾರ ಮಧ್ಯಾಹ್ನ 1.30ರ ಹೊತ್ತಿಗೆ ಈ ಘಟನೆ ನಡೆದಿದೆ. ನಿಪ್ಪಾಣಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಮೃತ ಯುವಕನ ಸಹೋದರ ಶಿವಾನಂದ ದೂರು ದಾಖಲಿಸಿದ್ದು, ಹೆಸ್ಕಾಂ ಸಹಾಯಕ ಎಂಜಿನಿಯರ್ ನನ್ನು ಆರೋಪಿಯನ್ನಾಗಿಸಲಾಗಿದೆ.

ಸಹೋದರರಿಬ್ಬರೂ ತರಕಾರಿ ವ್ಯಾಪಾರಸ್ಥರಾಗಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Check Also
Close
Back to top button