Belagavi NewsBelgaum NewsElection NewsKannada NewsKarnataka News

*ಮದುವೆ ಮನೆಯಲ್ಲಿ ಮತದಾನ ಜಾಗೃತಿ*

ಪ್ರಗತಿವಾಹಿನಿ ಸುದ್ದಿ: ಖಾನಾಪುರ ತಾಲೂಕಿನ ಬಿಜಗರ್ಣಿ ಸ್ವಿಪ್ ಸಮಿತಿ ಹಾಗೂ ಬಿಜಗರ್ಣಿ ಗ್ರಾ.ಪಂ. ವತಿಯಿಂದ  ಬಿಜಗರ್ಣಿ ಗ್ರಾಮದ ಶಿವಠಣಕರ ಹಾಗೂ ಆಂಗ್ರೊಳ್ಳಿ ಕುಟುಂಬದ ವಿವಾಹ ಸಮಾರಂಭದಲ್ಲಿ   ಮತದಾನ ಜಾಗೃತಿ  ಮೂಡಿಸಿ, ಮೇ. 7 ರಂದು ಕಡ್ಡಾಯವಾಗಿ ಮತದಾನ ಮಾಡುವಂತೆ ಕರೆ ನೀಡಿದರು.‌

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಆಡಳಿತ ಸಹಾಯಕರಾದ ಮೋಹನ್ ಮಾದಾರ ಮಾತನಾಡಿ  ಮೇ 7 ರಂದು ನಡೆಯಲಿರುವ ಲೋಕಸಭಾ  ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಕೈಜೋಡಿಸಬೇಕು ಭಾರತೀಯ ನಾಗರಿಕರಾದ ನಮಗೆ  ಮತದಾನ ಮಾಡುವ ಹಕ್ಕಿನ ಜೊತೆ ಕರ್ತವ್ಯ ಕೂಡ ಹೌದು ಎಂದರು. 

ಈ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ವಾಯ್.ಎಸ್.ಬಜಂತ್ರಿ ,ಕ್ಲರ್ಕ್/ಡಿ.ಇ.ಒ ಮೊಹನ ಮಾದಾರ. ಬಿ. ಎಫ್.ಟಿ. ಮಹಾದೇವ ಬಂಬಾಡಿ, ಗ್ರಾಮ ಪಂಚಾಯತ  ಎಲ್ಲ ಸಿಬ್ಬಂದಿ ಹಾಗೂ ಇತರರು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button