Kannada NewsKarnataka NewsLatest

ಶಾಸಕಿ ಅಂಜಲಿ ನಿಂಬಾಳ್ಕರ್ ಸೇರಿದಂತೆ ಹಲವು ಗಣ್ಯರಿಂದ ಮತದಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ತುರುಸಿನಲ್ಲಿ ಸಾಗಿದ್ದು ನಾನಾ ಕಡೆ ಗಣ್ಯರು ಪರಮಾಧಿಕಾರ ಚಲಾಯಿಸಿ ಇತರರಿಗೂ ಪ್ರೇರಣೆ ನೀಡಿದ್ದಾರೆ.

ಖಾನಾಪುರ ವಿಧಾನಸಭಾ ಕ್ಷೇತ್ರದ ಶಾಸಕಿ, ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಅವರು ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ಖಾನಾಪುರದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

Home add -Advt

ಬೆಳಗಾವಿ ಜಿಲ್ಲಾ ಸ್ವೀಪ್ ರಾಯಭಾರಿ ರಾಘವೇಂದ್ರ ಅಣ್ವೇಕರ್ ಅವರು ಟಿಳಕವಾಡಿಯ ಬುಧವಾರಪೇಟೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಕಳೆದ ಹಲವು ದಿನಗಳಿಂದ ಅವರು ಸ್ವೀಪ್ ರಾಯಭಾರಿಯಾಗಿ ನಿರಂತರ ಮತದಾನ ಜಾಗೃತಿಯಲ್ಲಿ ತೊಡಗಿದ್ದರು.

ಧಾರವಾಡ ಶಾಲಾ ಶಿಕ್ಷಣ ಇಲಾಖೆ ಸಹ ನಿರ್ದೇಶಕ ಗಜಾನನ ಮನ್ನಿಕೇರಿ ಅವರು ಗೋಕಾಕ ನಗರದ ಮತಗಟ್ಟೆ122 ರಲ್ಲಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಆಗಮಿಸಿ ಮತ ಹಕ್ಕು ಚಲಾವಣೆ ಮಾಡಿ “ಸದೃಢ ಸಮಾಜಕ್ಕೆ ನೀವು ಕೂಡ ತಪ್ಪದೇ ಮತದಾನ ಮಾಡಿ” ಎಂದು ಕರೆ ನೀಡಿದ್ದಾರೆ.

https://pragati.taskdun.com/belagaviwomendeathvoting-booth/
https://pragati.taskdun.com/minister-shasikala-jolle-mp-annasaheb-jolle-casted-vote-with-family-members/
https://pragati.taskdun.com/youngsters-started-voting-with-gomata-puja/

Related Articles

Back to top button