Latest

ಕೆವಿಜಿ ಬ್ಯಾಂಕ್ ಹಠಾವೋ ಚಳುವಳಿ ಪ್ರಾರಂಭಿಸುವ ಎಚ್ಚರಿಕೆ

ಪ್ರಗತಿವಾಹಿನಿ ಸುದ್ದಿ, ಧಾರವಾಡ –  ಧಾರವಾಡ ನಗರದ ಹೊರವಲಯದಲ್ಲಿರುವ ಕೆವಿಜಿ ಬ್ಯಾಂಕ್ ಮುಖ್ಯ ಕಛೇರಿಗೆ ನೂರಾರು ರೈತರು ಆಗಮಿಸಿ ಕಟಬಾಕಿ ಇರುವ ಕೃಷಿ ಸಾಲ ಕಡಿತಗೊಳಿಸಿ ಬೇರೆ ಬ್ಯಾಂಕ್ ಗಳಂತೆ ಓಟಿಎಸ್ ಮಾಡುವಂತೆ ಆಗ್ರಹಿಸಿದರು.
ಗುರುವಾರ ನೂರಾರು ರೈತರು ಬ್ಯಾಂಕ್ ವಿರುದ್ದ ಘೋಷಣೆ ಕೂಗುತ್ತಾ ಪ್ರತಿಭಟನೆ ಮಾಡಿ ರಾಜ್ಯ ಸರ್ಕಾರದ ಮೂಲಕ ಕೆವಿಜಿ ಬ್ಯಾಂಕ್ ಅಧಿಕಾರಿಗಳಿಗೆ ರೈತರ ಕಟಬಾಕಿ ಕೃಷಿ ಸಾಲದ ಬಡ್ಡಿ ಮನ್ನಾಮಾಡಿ ಶೇ 60 -90ಕಟಾವುಗೊಳಿಸಿ ಸಾಲ ಮರುಪಾವತಿ ಮಾಡುವಂತೆ ನಿರ್ದೇಶನ ನೀಡುವಂತೆ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ರೈತ ಮುಖಂಡರು ಮನವಿ ಮಾಡಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಪ್ರಧಾನ ಕಾರ್ಯದರ್ಶಿ ಮಹಾಂತೇಶ ಕಮತ ಮತ್ತು ಸವದತ್ತಿ ಎಪಿಎಂಸಿ ಸದಸ್ಯ ಎಫ್.ಎಸ್.ಸಿದ್ದನಗೌಡರ  ಮನವಿ ನೀಡಿ ಮಾತನಾಡಿ, ಕಳೆದ ಆರು ವರ್ಷಗಳಿಂದ  ಅತಿವೃಷ್ಠಿ, ಅನಾವೃಷ್ಠಿ ಸಂಭವಿಸಿದರೆ ಕಳೆದ ಎರಡು ವರ್ಷದಿಂದ ಮಹಾಮಾರಿ ಕರೊನಾದ ಹಾವಳಿಯಿಂದ ಕೃಷಿಕರ ಜೀವನ ದುಸ್ಥರವಾಗಿದ್ದು ಇಂತಹ ಪರಿಸ್ಥಿತಿಯ ಅವಲೋಕನ ಮಾಡಿ ಅನೇಕ ಬ್ಯಾಂಕ್ ಗಳು ಕಟಬಾಕಿ ಕೃಷಿ ಸಾಲದ ಅಸಲಿನಲ್ಲಿ 60-90ಶೇ ಕಡಿತಗೊಳಿಸಿ ರೈತನ ಕಷ್ಟಕ್ಕೆ
ಸ್ಪಂದಿಸುತಿದ್ದರೆ ಕೆವಿಜಿ ಬ್ಯಾಂಕ್ ಮೊಂಡುತನ ಮಾಡುವದನ್ನು ಮುಂದುವರೆಸುತ್ತಿರುವದು ನ್ಯಾಯಸಮ್ಮತವಲ್ಲ ಎಂದು ಅಕ್ರೋಶವ್ಯಕ್ತಪಡಿಸಿದರು.
   ರೈತರು ಒಂದಿಲ್ಲ ಒಂದು ಸಂಕಷ್ಟದ ಸುಳಿಗೆ ಸಿಕ್ಕು ಜೀವನ ನಡೆಸುವದೆ ಭಾರವಾಗಿ ಪರಿಣಮಿಸುತ್ತಿದೆ. ಇಂತಹ ಪರಸ್ಥಿತಿ ಅವಲೊಕಿಸಿ ಅನೇಕ ರಾಷ್ಟೀಕೃತ ಹಾಗೂ ಖಾಸಗಿ ಸ್ವಾಮ್ಯದ ಬ್ಯಾಂಕ್ ಗಳು ರೈತರ ಕಟಬಾಕಿ ಸಾಲದ ಬಡ್ಡಿ ಮನ್ನಾ ಮಾಡಿ ಅಸಲಿನಲ್ಲಿ ಶೇ 60-90 ರಷ್ಟು ಮನ್ನಾ ಮಾಡಿ ಉಳಿದ ಮೊತ್ತಕ್ಕೆ ಕಾಲಾವಕಾಶ ನೀಡಿ ಸಾಲ ಮರುಪಾವತಿಗೆ ಅವಕಾಶ ನೀಡುತ್ತಿವೆ.
 ಗ್ರಾಮೀಣ ಪ್ರದೇಶದ ರೈತರ ಜೀವನಾಡಿಯಾಗಿದ್ದ ಮಲಪ್ರಭಾ ಗ್ರಾಮೀಣ ಬ್ಯಾಂಕ್ ಇಂದು ರೈತರ ಕೊರಳಿಗೆ ಉರಳಾಗುತ್ತಿದೆ.  ರೈತರ ಕಷ್ಟವನ್ನರಿತು ಕಟಬಾಕಿ ಸಾಲದ ಅಸಲಿನಲ್ಲಿ ಶೇ 60-90 ದಷ್ಟು ಮನ್ನಾ ಮಾಡಿ ಒಂದೆ ಬಾರಿಗೆ (ಓಟಿಎಸ್)ಸಾಲ ಮರುಪಾವತಿಗೆ ಅನಕೂಲ ಮಾಡಿಕೊಡಲು ಆಗ್ರಹಿಸಿದರು.
ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಅರ್ಪಿಸಿದ ರೈತ ಮುಖಂಡರು, ಸರ್ಕಾರದ ಮೂಲಕ  ಕೆವಿಜಿ ಬ್ಯಾಂಕ್ ಗೆ ನಿರ್ದೇಶನ ನೀಡಬೇಕು.
   ಅಲ್ಲದೆ ಕೆವಿಜಿ ಬ್ಯಾಂಕ್ ಅಧ್ಯಕ್ಷರು ರೈತರ ಮನವಿಗೆ ಸ್ಪಂದಿಸಿ ಕಟಬಾಕಿ ಸಾಲಗಾರ ರೈತರಿಗೆ ಆಸರೆಯಾಗಬೇಕು, ಜಾಮೀನರಾದವರ ಖಾತೆಗಳಲ್ಲಿ ಜಮೆಯಾದ ಬೆಳೆ ಪರಿಹಾರ, ಫಸಲ ಭೀಮಾ, ಕಿಸಾನ ಸಮ್ಮಾನ ಹಾಗೂ ಇತರ ಹಣವನ್ನು ಲಾಕ್ ಮಾಡಿರುವದನ್ನ ತೆರವುಗೊಳಿಸಬೇಕು ಎಂದು ಆಗ್ರಹ ಮಾಡಿದರು.
ಈ ಹಿಂದೆ ಅನೇಕ ಸಾರಿ ಮನವಿ ಮಾಡಿದರು ಯಾವುದೆ ಸ್ಪಂದನೆ ಕೆವಿಜಿ ಬ್ಯಾಂಕ್ ದಿಂದ ಬಂದಿಲ್ಲ. ರೈತರ ಜೊತೆ ಇದೆ ರೀತಿ ಚಲ್ಲಾಟವಾಡುತಿದ್ದರೆ  ಗ್ರಾಮೀಣ ಪ್ರದೇಶಗಳಲ್ಲಿರುವ ಕೆವಿಜಿ ಬ್ಯಾಂಕ್ ಹಠಾವೋ ಚಳುವಳಿ ಪ್ರಾರಂಭಿಸಬೇಕಾಗುವ ಅನಿವಾರ್ಯತೆ ಬಂದಿದೆ ಎಂದು ಬ್ಯಾಂಕ್ ಅಧಿಕಾರಿಗಳನ್ನು ರೈತರು ತರಾಟಗೆ ತೆಗೆದುಕೊಂಡರು.
ರೈತ ಮುಖಂಡ ಮಲ್ಲಿಕಾರ್ಜುನ ಹುಂಬಿ, ಸಚಿನ ಪಟಾತ, ಮಹಾಂತೇಶ ವಿವೇಕಿ ಮಾತನಾಡಿ, ರೈತರಿಗೆ ಸರಿಯಾದ ಬೆಳೆ ಬಂದು ಅದಕ್ಕೆ ಯೋಗ್ಯದರದ ಬೆಲೆ ಸಿಕ್ಕಿದ್ದರೆ ಸಾಲವನ್ನು ಬಡ್ಡಿ ಸಮೇತ ಮರುಪಾವತಿ ಮಾಡುತಿದ್ದೆವು ಆದರೆ ಇಂದಿನ ಬೆಲೆ ಏರಿಕೆ ಪರಿಸರದ ವಿಕೊಪದಿಂದ ರೈತನಿಗೆ ಕೃಷಿಯಲ್ಲಿ ನಷ್ಟ ಉಂಟಾಗಿ ಮಾಡಿದ ಸಾಲವನ್ನು ತೀರಿಸದೆ ಆತ್ಮಹತ್ಯೆಗೆ ದಾರಿಯಾಗುತ್ತಿದೆ ಇಂತಹ ಪರಿಸ್ಥಿತಿಯಲ್ಲಿ ಕಟಬಾಕಿ ಸಾಲದ ಅಸಲನ್ನು ಕಡಿತಮಾಡಿ ಶೇ 10-20ಪ್ರತಿಶತ ಅಸಲಿನೊಂದಿಗೆ ಮರುಪಾವತಿ ಮಾಡಿಕೊಬೇಕೆಂದು ಬ್ಯಾಂಕ್ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ಧಾರವಾಡ ಹಾಗೂ ಗದಗ ಜಿಲ್ಲೆಯ ರೈತ ಮುಖಂಡರಾದ, ಮಹಾಂತೇಶ ಪಟಾತ, ಗಂಗಾಧರ ಮತ್ತಿಕೊಪ್ಪ, ಸೋಮಲಿಂಗಪ್ಪ ಕೋಟಗಿ, ಸೋಮಪ್ಪ ಬುರ್ಲಿ, ಶ್ರೀಶೈಲ ಬಾಳೆಕುಂದರಗಿ, ಅಪ್ಪಯ್ಯ ಬೋಳೆತ್ತಿನ, ಸೋಮಲಿಂಗಪ್ಪ ಹುಂಬಿ, ಮುಂತಾದವರು ಆಗಮಿಸಿದ್ದರು.ಧಾರವಾಡ ಸಬರಮನ್ ಠಾಣೆಯ ಪೊಲಿಸರು ಯಾವುದೆ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದು ಬಸ್ತ್ ಏರ್ಪಡಿಸಿದ್ದರು.

Related Articles

Back to top button