Latest

3 ವರ್ಷದ ಮಗುವಿನೊಂದಿಗೆ ನಾಲೆಗೆ ಹಾರಿದ ತಾಯಿ ಆತ್ಮಹತ್ಯೆ

ಪ್ರಗತಿವಾಹಿನಿ ಸುದ್ದಿ; ಹಾಸನ: ವರದಕ್ಷಿಣೆ ಕಿರುಕುಳಕ್ಕೆ ನೊಂದ ತಾಯಿ ಮಗುವಿನೊಂದಿಗೆ ಆತ್ಮಹತ್ಯೆಗೆ ಶರಣಾದ ಘಟನೆ ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲೂಕಿನ ದೊಡ್ಡಕುಂಚೇವುಕೊಪ್ಪಲು ಗ್ರಾಮದಲ್ಲಿ ನಡೆದಿದೆ.

23 ವರ್ಷದ ಭವ್ಯ ಹಾಗೂ 3 ವರ್ಷದ ಮಗು ವೇದಾಂತ್ ಮೃತರು. ಮನೆಯವರ ಕಿರುಕುಳಕ್ಕೆ ಬೇಸತ್ತ ಭವ್ಯ ಮಗುವಿನೊಂದಿಗೆ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ಭವ್ಯ ಶವ ದೊಡ್ಡಕುಂಚೇನಹಳ್ಳಿ ಕೆರೆಯಲ್ಲಿ ಪತ್ತೆಯಾಗಿದ್ದರೆ, ಮಗುವಿನ ಶವ ನಾಲೆಯಲ್ಲಿ ಪತ್ತೆಯಾಗಿದೆ. ಭವ್ಯ ಪತಿ ಶ್ರೀನಿವಾಸ್ ಹಾಗೂ ಅತ್ತೆ ಅಕ್ಕಯಮ್ಮ ವಿರುದ್ಧ ಮೃತರ ಕುಟುಂಬಸ್ಥರು ದೂರು ನೀಡಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಭವ್ಯ ಹಾಗೂ ಶ್ರೀನಿವಾಸ್ ವಿವಾಹವಾಗಿದ್ದರು. ಆರಂಭದಲ್ಲಿ ವರದಕ್ಷಿಣೆ ಏನೂ ಬೇಡವೆಂದು ಹೇಳಿ ವಿವಾಹವಾಗಿದ್ದ ಶ್ರೀನಿವಾಸ್. ಬಳಿಕ ಬರ ಬರುತ್ತಾ ತಾಯಿ ಅಕ್ಕಯ್ಯಮ್ಮ ಹಾಗೂ ಮಗ ಇಬ್ಬರೂ ಭವ್ಯಳಿಗೆ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದರು. ಇದೇ ಕಾರಣಕ್ಕೆ ಮನೆಯಲ್ಲಿ ಆಗಾಗ ಜಗಳವಾಗುತ್ತಿತ್ತು. ಈ ಬಗ್ಗೆ ಭವ್ಯ ತಾಯಿ ಬಳಿ ಹೇಳಿ ಕಣ್ಣೀರಿಟ್ಟಿದ್ದಳು. ಹಲವು ಬಾರಿ ಗ್ರಾಮದ ಹಿರಿಯರು ಸಂಧಾನವನ್ನೂ ಮಾಡಿಸಿದ್ದರು. ಆದರೂ ಬುದ್ಧಿ ಕಲಿಯದ ಭವ್ಯಾ ಪತಿ ಶ್ರೀನಿವಾಸ್ ಪತ್ನಿಗೆ ತವರು ಮನೆಯವರೊಂದಿಗೆ ಫೋನ್ ನಲ್ಲಿ ಮಾತನಾಡಲೂ ಬಿಡುತ್ತಿರಲಿಲ್ಲ. ತಾಯಿ ಹಾಗೂ ಮಗ ಮನೆಯಿಂದ ಹೊರ ಹೋಗುವಾಗ ಭವ್ಯಾ ಹಾಗೂ ಮಗುವನ್ನು ಕೂಡಿಹಾಕಿ ಹೋಗುತ್ತಿದ್ದರು. ವಾರದ ಹಿಂದೆ ಭವ್ಯಾ ಹಾಗೂ ಮಗುವನ್ನು ಮೂರು ದಿನ ಮನೆಯಲ್ಲಿ ಕೂಡಿ ಹಾಕಿ ಹೋಗಿದ್ದ ಶ್ರೀನಿವಾಸ್ ಹಾಗೂ ಆತನ ತಾಯಿ ಸಂಬಂಧಿಕರ ಮನೆಗೆ ಹೋಗಿದ್ದರು.

ಈ ವೇಳೆ ಊಟಕ್ಕೂ ಪರದಾಡಿದ್ದ ಭವ್ಯ, ಕಿಡಕಿಯಲ್ಲಿ ಗ್ರಾಮದ ಯುವಕನ ಬಳಿ ಬಿಸ್ಕೇಟ್ ತರಿಸಿ ಮಗುವಿಗೆ ತಿನ್ನಿಸಿದ್ದಳು. ಈ ಬಗ್ಗೆ ನ.19ರಂದು ತಾಯಿಗೆ ಕರೆ ಮಾಡಿ ಹೇಳಿ ಕಣ್ಣೀರಿಟ್ಟಿದ್ದ ಭವ್ಯ ಈಗ ಮಗುವಿನೊಂದಿಗೆ ದೊಡ್ಡಕುಂಚೇವುಕೊಪ್ಪಲು ಬಳಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಭೀಕರ ಭೂಕಂಪ; 40ಕ್ಕೂ ಹೆಚ್ಚು ಜನರ ದುರ್ಮರಣ

https://pragati.taskdun.com/indonesiaearthquake40-people-dead/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button