Kannada NewsKarnataka NewsLatest

*ನದಿಯಲ್ಲಿ ತೇಲಿ ಬಂತು ಮಹಿಳೆಯ ಶವ; ಕಂಗಾಲಾದ ಸ್ಥಳೀಯರು*

ಪ್ರಗತಿವಾಹಿನಿ ಸುದ್ದಿ: ಅಪರಿಚಿತ ಮಹಿಳೆಯೊಬ್ಬರ ಮೃತದೇಹ ಅರ್ಕಾವತಿ ನದಿಯಲ್ಲಿ ತೇಲಿ ಬಂದಿರುವ ಘಟನೆ ಬೆಂಗಳೂರಿನ ಉತ್ತರ ತಾಲೂಕಿನಲ್ಲಿ ನಡೆದಿದೆ. ಇದನ್ನು ಕಂಡ ಗ್ರಾಮಸ್ಥರು ಕಂಗಾಲಾಗಿದ್ದಾರೆ.

Home add -Advt

ಸುಮಾರು 35 ವರ್ಷದ ಮಹಿಳೆಯ ಶವ ನದಿಯಲ್ಲಿ ತೇಲಿ ಬಂದಿದ್ದು, ಕೊಳೆತ ಸ್ಥಿತಿಯಲ್ಲಿದೆ. ಹಸುಗಳನ್ನು ಮೇಯಿಸಲೆಂದು ನದಿ ದಡಕ್ಕೆ ತೆರಳಿದವರು ಮಹಿಳೆಯ ಮೃತದೇಹ ಗಮನಿಸಿದ್ದಾರೆ.

ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾದನಾಯಕನಹಳ್ಳಿ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ದುಷ್ಕರ್ಮಿಗಳು ಮಹಿಳೆಯನ್ನು ಕೊಲೆಗೈದು ಶವವನ್ನು ತಂದು ನದಿಗೆ ಬಿಸಾಕಿ ಹೋಗಿರುವ ಶಂಕೆ ವ್ಯಕ್ತವಾಗಿದೆ.


Related Articles

Back to top button