
ಪ್ರಗತಿವಾಹಿನಿ ಸುದ್ದಿ: ಸಹೋದರಿ ಜೊತೆ ಫೋನ್ ನಲ್ಲಿ ಮಾತನಾಡಿದ್ದಕ್ಕೆ ಯುವಕನೊಬ್ಬನನ್ನು ಅಣ್ಣಂದಿರು ಬರ್ಬರವಾಗಿ ಹತ್ಯೆಗೈದ ಘಟನೆ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಾಲಾಪುರದಲ್ಲಿ ಈ ಘಟನೆ ನಡೆದಿದೆ. ಯುವತಿಯ ನಾಲ್ವವರು ಅಣ್ಣಂದಿರು ಸೇರಿ ಯುವಕನನ್ನು ಚಾಕುವಿನಿಂದ ಇರಿದು ಕೊಂದಿದ್ದಾರೆ.
ಪ್ರವೀಣ್ ಮಾಂಗ್ , ಅನಿಲ್ ಮಾಂಗ್, ಆಕಾಶ್ ಮಾಂಗ್ ಪ್ರದೀಪ್ ಮಾಂಗ್ ಎಂಬ ಸಹೋದರರು ಯುವಕ ಮಂಜುನನ್ನು ಹತ್ಯೆಗೈದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.