Latest

ಭಾರತೀಯ ಸಂಸ್ಕೃತಿಯನ್ನು ಬೆಳೆಸಲು ಶಿಕ್ಷಣ ಸಂಸ್ಥೆಗಳು ಮುಂದಾಗಬೇಕು -ನೀಲಕಂಠ ಶ್ರೀಗಳು

ಪ್ರಗತಿವಾಹಿನಿ ಸುದ್ದಿ, ಯರಗಟ್ಟಿ :

ಸ್ಥಳೀಯ ಮಹಾಂತ ಪಬ್ಲಿಕ್ ಸ್ಕೂಲ್ ಸಂಸ್ಕೃತಿಯ ಅಡಿಯಲ್ಲಿ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತ ಯರಗಟ್ಟಿ ಭಾಗದ ವಿದ್ಯಾರ್ಥಿಗಳ ಆಶಾಕಿರಣವಾಗಿದೆ ಎಂದು ಮುರಗೋಡ ಮಠದ ನೀಲಕಂಠ ಶ್ರೀಗಳು ಅಭಿಪ್ರಾಯ ಪಟ್ಟರು.
ಅವರು ಇಲ್ಲಿನ ಮಹಾಂತ ಪಬ್ಲಿಕ್ ಸ್ಕೂಲ್ ನ ೪ನೇ ವಾರ್ಷಿಕೋತ್ಸವದ ನಿಮಿತ್ಯ ಮಹಾಂತ ಮಕ್ಕಳ ಸಂಭ್ರಮ, ಮಹಿಳಾ ಅಧಿಕಾರಿಗಳಿಗೆ ಸನ್ಮಾನ ಹಾಗೂ ಕೃಷಿಕ, ಸೈನಿಕ ಮತ್ತು ಶಿಕ್ಷಕರುಗಳಿಗೆ ಮಹಾಂತಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಇಂದಿನ ಯುವ ಜನತೆ ವಿದೇಶಿ ವ್ಯಾಮೋಹಕ್ಕೆ ಒಳಗಾಗಿದ್ದು ಭಾರತೀಯ ಸಂಸ್ಕೃತಿ ಮಾಯವಾಗುತ್ತಿದೆ. ಭಾರತೀಯ ಸಂಸ್ಕೃತಿಯನ್ನು ಬೆಳೆಸಲು ಶಿಕ್ಷಣ ಸಂಸ್ಥೆಗಳು ಚಿಕ್ಕಮಕ್ಕಳಿಗೆ ಸಂಸ್ಕೃತಿ ಸಂಸ್ಕಾರಗಳನ್ನು ಬೆಳೆಸುವಲ್ಲಿ ಮುಖ್ಯ ಪಾತ್ರವಹಿಸಬೇಕಾಗಿದೆ ಎಂದರು.
ಎಸ್‌ಬಿಡಿಐ ಕಾಲೇಜಿನ ಉಪನ್ಯಾಸಕ ಎಂ.ಎಸ್.ಜಾವೂರ ಮಾತನಾಡುತ್ತಾ ಮಕ್ಕಳಿಗೆ ಇಂಗ್ಲೀಷ ಭಾಷೆಯ ಜೊತೆಗೆ ಕನ್ನಡ ಭಾಷೆಗೂ ಪ್ರಾಮುಖ್ಯತೆಯನ್ನು ನೀಡಬೇಕು ಎಂದರು.
ವಿಶ್ರಾಂತ ಶಿಕ್ಷಕ ಮಲ್ಲಿಕಾರ್ಜುನ ಪೂರ್ವಿಮಠ ಇವರಿಗೆ ಮಹಾಂತಶ್ರೀ ಶಿಕ್ಷಕ, ಮಲ್ಲಪ್ಪ ಅಳಗೋಡಿ ಇವರಿಗೆ ಮಹಾಂತಶ್ರೀ ಸೈನಿಕ, ಸಂತೋಷ ಕಿತ್ತೂರ ಇವರಿಗೆ ಮಹಾಂತಶ್ರೀ ಕೃಷಿಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಅಧಿಕಾರಿಗಳಾದ ಬಿ.ಎ.ಚಪ್ಟಿ, ಆಶಾ ಪರೀಟ, ವಾಯ್.ಎಚ್.ಶೆರಿ, ಎಚ್.ಕೆ.ಚೌರಡ್ಡಿ, ಭಾಗ್ಯಶ್ರೀ ದಾಸರ, ಗೌರಿ ಘೋರ್ಪಡೆ, ಶರಣಮ್ಮ, ಯಶೋದಾ ಚವಲಾರ ಇವರನ್ನು ಸನ್ಮಾನಿಸಲಾಯಿತು.
ಗೋಕಾಕ ಕೆಎಲ್‌ಇ ಸಂಸ್ಥೆಯ ಪ್ರಾಚಾರ್ಯೆ ಅನುಪಾ ಕೌಶೀಕ ಮಾತನಾಡಿದರು. ಭಾಗೋಜಿಕೊಪ್ಪ ಹಿರೇಮಠದ ಶಿವಲಿಂಗ ಶಿವಾಚಾರ್ಯ ಮುರಘರಾಜೇಂದ್ರ ಶ್ರೀಗಳು, ಗಣಪತಿ ಮಹಾರಾಜರು, ಕೊರಕೊಪ್ಪದ ರೇವಣಸಿದ್ದ ಶ್ರೀಗಳು ಆಶಿರ್ವಚನ ನೀಡಿದರು. ಸಂಸ್ಥೆಯ ಅಧ್ಯಕ್ಷ ಬಸವರಾಜ ಆಯಟ್ಟಿ ಅಧ್ಯಕ್ಷತೆ ವಹಿಸಿದ್ದರು, ಜಿಪಂ ಸದಸ್ಯ ಅಜೀತಕುಮಾರ ದೇಸಾಯಿ ನೇತೃತ್ವವಹಿಸಿದ್ದರು, ಗ್ರಾಪಂ ಅಧ್ಯಕ್ಷೆ ಕಸ್ತೂರಿ ಕಡೆಮನಿ, ಗ್ರಾಪಂ ಸದಸ್ಯ ಗೌಡಪ್ಪ ಉದಪುಡಿ, ಸುದೀರ ಗೋಡಿ, ಗೋರೆಸಾಬ ನಧಾಪ, ಮುಖ್ಯ ಶಿಕ್ಷಕ ಮೃತ್ಯುಂಜಯ ಹಳದಾರಮಠ, ಸಿದ್ದಪ್ಪ ಕಂಬಾರ ಉಪಸ್ಥಿತರಿದ್ದರು. ನಂತರ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.
ಶಿಕ್ಷಕಿ ಮೇರಿ ಸ್ವಾಗತಿಸಿದರು, ಶಿವಾನಂದ ಕರ್ಜಗಿಮಠ ನಿರೂಪಿಸಿದರು, ಲಕ್ಷ್ಮೀ ಹಣಬರ ವಂದಿಸಿದರು.

(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ, ಇತರ ಗ್ರುಪ್ ಗಳಿಗೆ ಶೇರ್ ಮಾಡಿ)

 

Home add -Advt

Related Articles

Back to top button