Latest

ಮಹಿಳೆಯರು ಸ್ವಸಾಮರ್ಥ್ಯ ಅರ್ಥ ಮಾಡಿಕೊಂಡು ಮುನ್ನುಗ್ಗಬೇಕು -ಜ್ಯೋತಿ ಬಾವಿಕಟ್ಟಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದ ಮಹಿಳಾ ಘಟಕ ಮತ್ತು ಮಹಿಳಾ ಲೈಂಗಿಕ ದೌರ್ಜನ್ಯ ತಡೆ ಘಟಕದ ವತಿಯಿಂದ ಮಹಿಳಾ ದಿನಾಚರಣೆ ಕಾರ್ಯಕ್ರಮ ಹಮ್ಮಿಳ್ಳಲಾಗಿತ್ತು.

ಈ ಕಾರ್ಯಕ್ರಮದ ಉದ್ಘಾಟಕರಾದ ಮಾಜಿ ಉಪಮಹಾಪೌರರಾದ ಜ್ಯೋತಿ ಭಾವಿಕಟ್ಟಿ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಸ್ಥಾನ ಮಾನ ನೀಡಿದ್ದಾರೆ, ಆದರೆ ಮಹಿಳೆಯರು ಸ್ವಸಾಮರ್ಥ್ಯ ಅರ್ಥ ಮಾಡಿಕೊಂಡು ಸಮಜದಲ್ಲಿ ಮುನ್ನುಗ್ಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಭಾರತಿ ವಾಳವೇಕರ ನ್ಯಾಯವಾದಿಗಳು ಮಾತನಾಡಿ, ಇಂದಿನ ಯುಗದಲ್ಲಿ ಮಹಿಳೆ ಎಲ್ಲಾ ಕ್ಷೇತ್ರದಲ್ಲಿ ಸವಾಲುಗಳನ್ನು ಸ್ವೀಕರಿಸಿ ತನ್ನ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾಳೆ ಆದರೆ ತನಗೆ ಅನ್ಯಾಯ ಶೋಷಣೆಗಳಾದ ಕಾನೂನಾತ್ಮಕ ನೆರವು ಪಡಿದುಕೊಳ್ಳುವ ಅರಿವು ಮಹಿಳೆಯರಿಗೆ ಬೇಕು ಮತ್ತು ಮಹಿಳೆಯ ಪರ ಹಲವಾರು ಕಾನೂನುಗಳಿವೆ ಎಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಮನೋವೈದ್ಯೆ ಡಾ.ಸರಸ್ವತಿ ಅರವಿಂದ ತೇಣಗಿ
 ಮಾತನಾಡಿ ಮಹಿಳೆಯು ಭಾವನಾತ್ಮಕವಾಗಿ ಎಷ್ಟೇ ದುರ್ಬಲರಾದರು ಕೂಡಾ ಮಾನಸಿಕವಾಗಿ ಸದೃಢವಾಗಿರುತ್ತಳೆ. ಮಹಿಳೆಯರು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ದಿನ ನಿತ್ಯದ ಸಂಘರ್ಷಗಳಿಗೆ ಅಂದೇ ಪರಿಹಾರಗಳನ್ನು ಪಡೆದುಕೊಳ್ಳಬೇಕು. ಇತ್ತೀಚಿನ ಹೊಸ ಕಾಯಿಲೆಗಳಾದ ವಾಟ್ಸಪ್ಟಿಕ್, ಇಂಟರ‍್ನೆಟಿಕ್ ಅಂತಹ ಸಮಸ್ಸೆಗಳಿಗೆ ಮಹಿಳೆಯರು ಹೆಚ್ಚು ತುತ್ತಾಗುತ್ತಿರುವುದು ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕೀರ್ತಿ ಶೇಖರ್ ಅವರು ಮಾತನಾಡಿ, ಪ್ರತಿಯೊಂದು ಹೆಣ್ಣಿಗೆ ತಾನು ಹೆಣ್ಣು ಎನ್ನುವ ಅಭಿಮಾನ ಇರಬೇಕು. ತನ್ನ ಪರೀಧಿಯನ್ನು ಅರ್ಥ ಮಾಡಿಕೊಂಡು ತನ್ನ ಇಚ್ಛಾ ಶಕ್ತಿಗಳನ್ನು ಪೂರ್ಣಗೊಳಿಸಿಕೊಳ್ಳಬೇಕು ಮತ್ತು ವೃತ್ತಿ ರಂಗದಲ್ಲಿ ಮಹಿಳೆ ಹಗಲು ರಾತ್ರಿಗಳೆನ್ನದೇ ಗಂಡಿನ ಸರೀ ಸಮಾನವಾಗಿ ದುಡಿಯುವ ಸವಾಲುಗಳನ್ನು ಸ್ವೀಕರಿಸುವ ಧೈರ್ಯ ಹೆಣ್ಣಿಗಿರಬೇಕು. ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ತನ್ನನ್ನು ಸಂರಕ್ಷಿಸಿಕೊಳ್ಳುವ ರಕ್ಷಣಾ ಕಲೆ ಪಠ್ಯದಲ್ಲಿ ಅಳವಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಡಾ.ಎನ್.ಜಿ.ಬಟ್ಟಲ, ಮಾತನಾಡಿ ಮಹಿಳೆಯರಿಂದು ಎಲ್ಲಾ ಕ್ಷೆತ್ರದಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುವುದರ ಜೊತೆಗೆ ಕುಟುಂಬವನ್ನು ಸಮರ್ಥವಾಗಿ ನಿರ್ವಹಿಸುತ್ತ ವೃತ್ತಿ ಮತ್ತು ಕುಟುಂಬದಲ್ಲಿ ಸಮತೋಲನವನ್ನು ಸಾಧಿಸಿಕೊಂಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳು ಅಕ್ಕ ಮಹಾದೇವಿ, ಬೆಳವಡಿ ಮಲ್ಲಮ್ಮ, ಕಿತ್ತೂರು ಚೆನ್ನಮ್ಮ, ಉಲ್ಲಾಳದ ರಾಣಿ ಅಬ್ಬಕ್ಕ ಮತ್ತು ಒನಕೆ ಓಬವ್ವ ಮತ್ತು ಸಾವಿತ್ರಿ ಬಾಯಿಯವರ ವೇಷಭೂಷಣಗಳನ್ನು ಧರಿಸಿ ಅವರ ಸಂದೇಶಗಳನ್ನು ಸಾರಿದರು.
ಉಪನ್ಯಾಸಕಿ ಆರ್.ವಿ ಅಕ್ಕಿ ಕಾರ್ಯಕ್ರಮ  ನಿರೂಪಿಸಿದರು.  ಉಪನ್ಯಾಸಕಿ ಎಸ್.ಜಿ.ಚಿನಿವಾಲ್ ಸ್ವಾಗತಿಸಿದರು. ಮತ್ತು ವಂದನಾರ್ಪಣೆಯನ್ನು ಉಪನ್ಯಾಸಕಿ ಆರ್.ಎ.ಚೆನವೀರ ನೆರವೇರಿಸಿದರು. 

Home add -Advt

(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ ಹಾಗೂ ಎಲ್ಲ ಗ್ರುಪ್ ಗಳಿಗೆ ಶೇರ್ ಮಾಡಿ)

Related Articles

Back to top button