Kannada NewsLatest

ರೈತರ ಕಣ್ಣೆದುರೇ ಹಸಿರಾದ ಫಸಲಿಗೆ ಜೆಸಿಬಿ ಹತ್ತಿಸಿದ ಅಧಿಕಾರಿಗಳು; ನಾಳೆ ಶಾಸಕಿ ಹೆಬ್ಬಾಳಕರ್ ಸ್ಥಳಕ್ಕೆ ಭೇಟಿ

ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ:

ಹಲಗಾದಲ್ಲಿ ತ್ಯಾಜ್ಯ ಸಂಸ್ಕರಣ ಘಟಕ ಸ್ಥಾಪನೆ ಸಂಬಂಧ ನಿನ್ನೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಪುತ್ರ ಮತ್ತು ರೈತರನ್ನು ಬಂಧಿಸಿದ್ದ ಪೊಲೀಸರು, ಅಧಿಕಾರಿಗಳು, ಗುರುವಾರ ರೈತರ ಕಣ್ಣೆದುರೇ ಅವರು ಬೆಳೆದಿದ್ದ ಹಸಿರಾದ ಫಸಲ ಮೇಲೆ ಜೆಸಿಬಿ ಹತ್ತಿಸಿ ನಾಶ ಮಾಡಿದ್ದಾರೆ.

Home add -Advt

ಸುಮಾರು 19 ಎಕರೆ ನೀರಾವರಿ ಜಮೀನನ್ನು ತ್ಯಾಜ್ಯ ಸಂಸ್ಕರಣ ಘಟಕಕ್ಕಾಗಿ ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಅಲ್ಲಿನ ಬೆಳೆಗಳನ್ನು ಸರ್ವನಾಶ ಮಾಡಿದ್ದಾರೆ. ರೈತರು ಅಸಹಾಯಕರಾಗಿ ನೋಡುತ್ತ ನಿಲ್ಲಬೇಕಾಯಿತು.

ಅಧಿಕಾರಿಗಳ ಈ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಶುಕ್ರವಾರ ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸುತ್ತಿದ್ದು, ರೈತರಿಗೆ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.

 

 

ಕರುಣೆ ಇಲ್ಲದ ಅಧಿಕಾರಿಗಳು ಹಸನಾಗಿ ಬೆಳೆದಿದ್ದ ಬೆಳೆಗಳನ್ನು ನಾಶ ಮಾಡಿದ್ದಾರೆ. ರೈತರ ಬೆವರಿಗೆ ಬೆಲೆಯೇ ಇಲ್ಲ. ಶುಕ್ರವಾರ ಬೆಂಗಳೂರಿನಿಂದ ಬೆಳಗಾವಿಗೆ ಬರುತ್ತಿದ್ದು, ಸ್ಥಳಕ್ಕೆ ಭೇಟಿ ನೀಡಿ ರೈತರ ಕಣ್ಣೀರು ಒರೆಸುವ ಕೆಲಸ ಮಾಡುತ್ತೇನೆ. ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ರೈತರಿಗೆ ನ್ಯಾಯ ಕೊಡಿಸುತ್ತೇನೆ.

-ಲಕ್ಷ್ಮಿ ಹೆಬ್ಬಾಳಕರ್, ಶಾಸಕಿ

Related Articles

Back to top button