ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಗೋವಾದ ಎಸ್ ಎಚ್ ಡೆಂಪೊ ಕಾಲೇಜ ಆಫ್ ಕಾಮರ್ಸ ಆಂಡ್ ಎಕನಾಮಿಕ್ಸನಲ್ಲಿ ನಡೆದ ವ್ಯವಸ್ಥಾಪನ ಸ್ಪರ್ಧೆ’ ರಣಭೂಮಿ-೨೦೧೯’ ರಲ್ಲಿ ನಗರದ ಕೆಎಲ್ಇ ಸಂಸ್ಥೆಯ ಲಿಂಗರಾಜ ಬಿಬಿಎ ಮಹಾವಿದ್ಯಾಲಯ ತಂಡವು ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿದೆ.
ಉದ್ಯಮಶೀಲತಾ ಅಭಿವೃದ್ಧಿ ವಿಭಾಗದಲ್ಲಿ ರುಚಿ ಪೋರವಾಲ ಪ್ರಥಮ, ಮಾರುಕಟ್ಟೆ ವಿಭಾಗದಲ್ಲಿ ಸೊಹೆಲ ಕಾರವಾ ಪ್ರಥಮ, ಹಣಕಾಸು ವಿಭಾಗದಲ್ಲಿ ನಮನ ಜೈನ ದ್ವಿತೀಯ ಮತ್ತು ಮಾನವ ಸಂಪನ್ಮೂಲ ವಿಭಾಗದಲ್ಲಿ ರಾಶಿ ಶಿರಗುಪ್ಪಿ ದ್ವಿತೀಯ ಸ್ಥಾನ ಪಡೆದಿದ್ದಾರೆ.