Latest

ಶ್ರದ್ಧಾಭಕ್ತಿಯಿಂದ ದಾರ್ಶನಿಕರ ಜಯಂತಿ ಆಚರಿಸಲು ಕರೆ

   ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ

 ಸರ್ವರಿಗೂ ಒಳಿತನ್ನೇ ಬಯಸಿದ ಮಹಾಪುರುಷರ ಜಯಂತಿಗಳನ್ನು ಸರಳತೆ ಹಾಗೂ ಶ್ರದ್ಧಾ ಭಕ್ತಿಯಿಂದ ಆಚರಿಸಿ ಅವರ ಆದರ್ಶಗಳನ್ನು ಪಾಲನೆ ಮಾಡುವುದು ಸಮಾಜದ ಜವಾಬ್ದಾರಿ ಎಂದು ಗ್ರೇಡ್-2 ತಹಶೀಲ್ದಾರ ಕೆ.ಕೆ. ಬೆಳವಿ ಹೇಳಿದರು.

ತಹಶೀಲ್ದಾರ ಕಚೇರಿಯ ಸಭಾ ಭವನದಲ್ಲಿ ಹಮ್ಮಿಕೊಂಡ ದಾರ್ಶನಿಕರ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು,  ಫೆ.1 ರಂದು ಶರಣ ಮಡಿವಾಳ ಮಾಚಿದೇವರ ಜಯಂತಿ, ಫೆ.12 ರಂದು ಸವಿತಾ ಮಹರ್ಷಿ ಜಯಂತಿ, ಫೆ.15 ರಂದು ಸಂತ ಸೇವಾಲಾಲ್  ಜಯಂತಿ, ಫೆ.19 ರಂದು ಛತ್ರಪತಿ ಶಿವಾಜಿ ಜಯಂತಿ ಹಾಗೂ ಫೆ.20 ರಂದು ಕವಿ ಸರ್ವಜ್ಞ ಜಯಂತಿಗಳನ್ನು ಸರಕಾರದ ನಿರ್ದೇಶನದಂತೆ ಆಚರಿಸಲಾಗುತ್ತಿದ್ದು ಎಲ್ಲ ಸಮುದಾಯದವರು ಸೇರಿ ಶಾಂತ ರೀತಿಯಿಂದ ಆಚರಿಸಿ ಯಶಸ್ವಿಗೊಳಿಸೋಣ ಎಂದರು.

ತಹಶೀಲ್ದಾರ ರೇಷ್ಮಾ ತಾಳಿಕೋಟೆ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಅಧ್ಯಕ್ಷ ಪ್ರಕಾಶ ದೇಶಪಾಂಡೆ, ಮಡಿವಾಳ ಸಂಘದ ಮಹಾದೇವ ಮಡಿವಾಳ, ಸಂಗಮೇಶ ಕರೋಶಿ, ಲಗಮಣ್ಣ ಮಡಿವಾಳ, ಎಸ್.ಕೆ. ತೇರಣಿ ಸೇರಿದಂತೆ ವಿವಿಧ ಸಮಾಜದ ಮುಖಂಡರು, ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಎನ್.ಆರ್.ಪಾಟೀಲ ಸ್ವಾಗತಿಸಿದರು. ಸಮಾಜ ಕಲ್ಯಾಣಾಧಿಕಾರಿ ಎಂ.ಆರ್. ನಾಗನೂರೆ ನಿರೂಪಿಸಿದರು.

Home add -Advt

Related Articles

Back to top button