ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ತಮ್ಮ ರಾಜಕೀಯ ಪ್ರವೇಶವನ್ನು ಖಚಿತಪಡಿಸುವತ್ತ ಸಾಗುತ್ತಿರುವ ಸುಮಲತಾ ಅಂಬರೀಶ್, ತಮ್ಮ ಅಭಿಮಾನಿಗಳ ಆಸೆ ಸೋಲಬಾರದು ಎಂದಿದ್ದಾರೆ.
ಮೂರೂ ಪಕ್ಷಗಳಲ್ಲೀಗ ಸುಮಲತಾ ಸಂಕಷ್ಟ!
ಆದಿಚುಂಚನಗಿರಿಗೆ ಭೇಟಿ ನೀಡಿದ್ದ ಅವರು, ತಾವು ಸ್ಪರ್ಧಿಸುವುದಾದರೆ ಮಂಡದಿಂದಲೇ. ಆದರೆ ಈ ಬಗ್ಗೆ ಇನ್ನೂ ಅಂತಿಮ ನಿರಧಾರ ತೆಗೆದುಕೊಳ್ಳಬೇಕಿದೆ. ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಬಗ್ಗೆಯೂ ನಿರ್ಧರಿಸಿಲ್ಲ ಎಂದರು.
ಆದಿಚುಂಚನಗಿರಿಗೆ 2 ತಿಂಗಳ ಹಿಂದೆಯೇ ಭೇಟಿ ಕೊಡಬೇಕಿತ್ತು. ಅಭಿಷೇಕ್ ನಟಿಸಿದ ಚಿತ್ರದ ಫಸ್ಟ್ ಟೀಸರ್ ಇದೇ 14ರಂದು ರಿಲೀಸ್ ಆಗುತ್ತಿದೆ. ಹೀಗಾಗಿ ಶ್ರೀಗಳ ಆಶೀರ್ವಾದ ಪಡೆಯಲು ಬಂದಿದ್ದೇವೆ. ಈ ಭೇಟಿಗೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು.