ಪ್ರಗತಿವಾಹಿನಿ ಸುದ್ದಿ, ಕಾರವಾರ
ಇರಾನ್ ಸಮುದ್ರದ ವ್ಯಾಪ್ತಿಯಲ್ಲಿ ಮೂರು ತಿಂಗಳ ಹಿಂದೆ ಬಂಧಿತರಾಗಿದ್ದ ಉತ್ತರ ಕನ್ನಡದ ೧೮ ಮೀನುಗಾರರನ್ನು ಮಂಗಳವಾರ ಬಿಡುಗಡೆ ಮಾಡಲಾಗಿದೆ.
ದುಬೈನ ಮೀನುಗಾರಿಕೆ ಬೋಟ್ ನಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಕನ್ನಡದ ಈ ಮೀನುಗಾರರು ಕಳೆದ ಆಗಸ್ಟ್ ನಲ್ಲಿ ಇರಾನ್ ಗಡಿ ದಾಟಿ ಕಿಂಗ್ ಫಿಶ್ ಹಿಡಿದಿದ್ದರು. ಆ ವೇಳೆ ಇರಾನ್ ನ ತಟ ರಕ್ಷಕ ಪಡೆಯವರು ಮೀನುಗಾರರನ್ನು ಬೋಟ್ ನಲ್ಲೇ ಬಂಧಿಸಿ ಇಟ್ಟಿದ್ದರು.
ಭಾರತ ವಿದೇಶಾಂಗ ಸಚೀವಾಲಯದ ಸತತ ಪ್ರಯತ್ನದ ಫಲವಾಗಿ ಮೀನುಗಾರರನ್ನು ಇರಾನ್ ಸರಕಾರ ಬಿಡುಗಡೆಗೊಳಿಸಿದೆ.
ಇದೀಗ ಮೀನುಗಾರರು ಇರಾನದಿಂದ ದುಬೈಗೆ ತೆರಳುತ್ತಿದ್ದಾರೆ.