ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿಯಲ್ಲಿ ಶನಿವಾರ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವಿಭಜನೆ ವಿರೋಧಿಸಿ ನಡೆದ ಐತಿಹಾಸಿಕ ಪ್ರತಿಭಟನೆಯ ಹಿಂದೆ ಇಡೀ ಬೆಳಗಾವಿ ಜಿಲ್ಲೆಯ ಜನರ, ಸಂಘಟನೆಗಳ ಸಹಕಾರವಿದೆ. ಈ ಅಭೂತಪೂರ್ವ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಎಲ್ಲರಿಗೂ ಸಂಘಟಕರು ಕೃತಜ್ಞತೆ ಸಲ್ಲಿಸಿದ್ದಾರೆ.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ಕಾರಂಜಿ ಮಠದ ಗುರುಸಿದ್ದ ಸ್ವಾಮಿಗಳು, ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ, ಲೋಕಸಭಾ ಸದಸ್ಯ ಸುರೇಶ ಅಂಗಡಿ, ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಶಾಸಕರಾದ ಅಭಯ ಪಾಟೀಲ, ಲಕ್ಷ್ಮಿ ಹೆಬ್ಬಾಳಕರ್, ಅನಿಲ ಬೆನಕೆ, ಮೇಯರ್ ಬಸಪ್ಪ ಚಿಕ್ಕಲದಿನ್ನಿ, ಉಪಮೇಯರ್ ಮಧುಶ್ರೀ ಪೂಜಾರ್, ಮಾಜಿ ಶಾಸಕರಾದ ಸಂಜಯ ಪಾಟೀಲ, ವಿಶ್ವನಾಥ ಪಾಟೀಲ, ಪ್ರಮುಖರಾದ ಅನಿಲ ಪೋತದಾರ, ಹಿರಿಯ ಪತ್ರಕರ್ತ, ಸಾಹಿತಿ ಡಾ.ಸರಜೂ ಕಾಟ್ಕರ್, ಡಾ.ಎಚ್.ಬಿ. ರಾಜಶೇಖರ, ಫೌಂಡ್ರಿ ಕ್ಲಸ್ಟರ್ ಚೇರಮನ್ ರಾಮ ಭಂಡಾರೆ, ಕರ್ನಾಟಕ ರಕ್ಷಣಾ ವೇದಿಕೆಯ ಮಹಾದೇವ ತಳವಾರ, ಗಣೇಶ ರೋಖಡೆ, ದೀಪಕ್ ಗುಡಗನಟ್ಟಿ ಮತ್ತು ಸರ್ವ ಸದಸ್ಯರು, ನ್ಯಾಯವಾದಿಗಳಾದ ಎಂ.ಬಿ.ಜಿರಲಿ, ಎಸ್.ಎಸ್.ಕಿವಡಸಣ್ಣವರ್, ಮುಳವಾಡಮಠ, ಪಾಲಿಕೆ ಸದಸ್ಯೆ ಅನುಶ್ರೀ ದೇಶಪಾಂಡೆ, ಕ್ರೆಡೈ ಅಧ್ಯಕ್ಷ ಕ್ವೈಸ್ ನೂರಾನಿ ಮತ್ತು ಸದಸ್ಯರು, ಪ್ರೊಫೇಶನಲ್ ಪೋರಮ್ ನ ಬಿ.ಎಸ್.ಪಾಟೀಲ ಹಾಗೂ ಸದಸ್ಯರು, ಮಾಜಿ ಮೇಯರ್ ಸಿದ್ದನಗೌಡ ಪಾಟೀಲ, ನಿವೃತ್ತ ಚೀಫ್ ಎಂಜಿನಿಯರ್ ವಿ.ಬಿ. ಜಾವೂರ್, ರೋಟರಿಯ ಸತೀಶ್ ಕುಲಕರ್ಣಿ, ಲೀನಾ ಟೋಪಣ್ಣವರ್, ಪ್ರತಿಭಟನೆಯಲ್ಲಿ ಪಾಲ್ಗೊಂಡ ಕೆಎಲ್ಇ, ಕೆಎಲ್ಎಸ್, ಜಿಐಟಿ, ಅಂಗಡಿ ಇನ್ ಸ್ಟಿಟ್ಯೂಟ್, ಎಸ್.ಜಿ.ಬಾಳೇಕುಂದ್ರಿ ಎಂಜಿನಿಯರಿಂಗ್ ಕಾಲೇಜು, ಮರಾಠಾ ಮಂಡಳ, ಜೈನ್ ಕಾಲೇಜ್, ಗೊಮಟೇಶ್ ವಿದ್ಯಾಪೀಠ ಮೊದಲಾದ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಸೀನಿಯರ್ ಸಿಟಿಜನ್ಸ್ ಅಸೋಸಿಯೇಶನ್ ನ ಬಾಪಟ್ ಮತ್ತು ಸದಸ್ಯರು, ಎಬಿವಿಪಿ ಸಂಘಟನೆ, ಇಂಡಿಯನ್ ಮೆಡಿಕಲ್ ಇಸೋಸಿಯೇಶನ್ ನ ಡಾ.ಎಸ್.ಕೆ.ಕುಲಗೋಡ್, ಡಾ. ಅನಿಲ ಪಾಟೀಲ ಮತ್ತು ಸದಸ್ಯರು, ವಾಣಿಜ್ಯೋದ್ಯಮ ಸಂಘದ ಸದಸ್ಯರು, ಕರ್ನಾಟಕ ರಕ್ಷಣಾ ವೇದಿಕೆ, ಬಾರ್ ಅಸೋಸಿಯೇಶನ್, ಚಾರ್ಟರ್ಡ್ ಅಸೋಸಿಯೇಶನ್, ನಿಯತಿ ಫೌಂಡೇಶನ್, ನವನಿರ್ಮಾಣ ಪಡೆ, ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್, ರಡ್ಡಿ ಅಸೋಸಿಯೇಶನ್ ನ ಪಾಂಡುರಂಗ ರಡ್ಡಿ ಮತ್ತು ಸದಸ್ಯರು, ವಿಟಿಯು ಸಿಂಡಿಕೇಟ್ ಸದಸ್ಯ ವಿಜಯ ಕುಚನೂರೆ, ದಿಲೀಪ್ ಚಂಡಕ್, ರೋಹಿತ್ ದೇಶಪಾಂಡೆ, ರಾಜ್ ಬೆಳಗಾಂವ್ಕರ್, ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ, ಸಾಹಿತಿಗಳಾದ ಚಂದ್ರಕಾಂತ ಪೋಕಳೆ, ಎ.ಬಿ.ಘಾಟಗೆ, ಬಾರ್ ಅಸೋಸಿಯೇಶನ್ ಸದಸ್ಯರು, ಹವ್ಯಕ ಮಂಡಳದ ಸದಸ್ಯರು, ಪತ್ರಿಕಾ ಮಾಧ್ಯಮ, ಎಲೆಕ್ಟ್ರಾನಿಕ್ಸ್ ಮೀಡಾಯಿ, ಡಿಜಿಟಲ್ ಮೀಡಿಯಾ, ಪ್ರತಿಭಟನೆಯಲ್ಲಿ ಪೊಲ್ಗೊಂಡ ಇನ್ನೂ ನೂರಾರು ಸಂಘಟನೆಗಳ ಪದಾಧಿಕಾರಿಗಳಿಗೆ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೆ ಸಂಘಟಕರ ಪರವಾಗಿ ಕ್ರೆಡೈ ರಾಜ್ಯ ಉಪಾಧ್ಯಕ್ಷ ಚೈತನ್ಯ ಕುಲಕರ್ಣಿ, ಹಿರಿಯ ಪತ್ರಕರ್ತ, ಪ್ರಗತಿವಾಹಿನಿ ಸಂಪಾದಕ ಎಂ.ಕೆ.ಹೆಗಡೆ, ವಾಣಿಜ್ಯೋದ್ಯಮ ಸಂಘದ ಚೇರಮನ್ ಮಹೇಶ ಬಾಗಿ, ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ರೋಹನ್ ಜುವಳಿ, ನಿಯತಿ ಫೌಂಡೇಶನ್ ಚೇರಮನ್ ಡಾ.ಸೋನಾಲಿ ಸರ್ನೋಬತ್, ಆರ್.ಸಿ.ಯು ಸಿಂಡಿಕೇಟ್ ಸದಸ್ಯ ರಾಜು ಚಿಕ್ಕನಗೌಡರ, ನವನಿರ್ಮಾಣ ಪಡೆಯ ರಾಜೀವ ಟೋಪಣ್ಣವರ್, ಕಿರಣ ನಿಪ್ಪಾಣಿಕರ್ ಮತ್ತಿತರರು ಧನ್ಯವಾದ ಸಮರ್ಪಿಸಿದ್ದಾರೆ.
ನಾನು ಬೆಳಗಾವಿಗೆ ಬಂದ ಕಳೆದ 45 ವರ್ಷದ ಇತಿಹಾಸದಲ್ಲೇ ಇಂತಹ ಪ್ರತಿಭಟನೆ, ಇಷ್ಟೊಂದು ಜನಸ್ತೋಮ ನೋಡಿಲ್ಲ. ಇದೊಂದು ನ ಭೂತೋ ನ ಭವಿಷ್ಯತಿ ಎನ್ನುವ ರೀತಿಯಲ್ಲಿ ನಡೆದ ಪ್ರತಿಭಟನೆ.
-ಡಾ.ಸರಜೂ ಕಾಟ್ಕರ್,
ಹಿರಿಯ ಪತ್ರಕರ್ತರು, ಕೇಂದ್ರ ಸಾಹಿತ್ಯ ಅಕಾಡಮಿ ಸದಸ್ಯರು
(ನಿಮ್ಮ ಪ್ರತಿಕ್ರಿಯೆಗಳನ್ನು ಕಮೆಂಟ್ ಬಾಕ್ಸನಲ್ಲಿ ಹಾಕಿರಿ)