Latest

ಕಾರವಾರ ಕ್ಷೇತ್ರದಲ್ಲಿ 13 ಅಭ್ಯರ್ಥಿಗಳು ಕಣದಲ್ಲಿ

ಪ್ರಗತಿವಾಹಿನಿ ಸುದ್ದಿ, ಕಾರವಾರ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಇಬ್ಬರು ಸೋಮವಾರ ತಮ್ಮ ನಾಮಪತ್ರವನ್ನು ವಾಪಸ್ ಪಡೆದಿದ್ದು ಅಂತಿಮವಾಗಿ 13 ಅಭ್ಯರ್ಥಿಗಳು ಕಣದಲ್ಲಿ ಉಳಿದಂತಾಗಿದೆ.

Home add -Advt

ಒಟ್ಟು 17 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಅವರಲ್ಲಿ ಇಬ್ಬರ ನಾಮಪತ್ರ ತಿರಸ್ಕೃತವಾಗಿದ್ದು 15 ಜನರ ನಾಮಪತ್ರಗಳು ಕ್ರಮಬದ್ದವಾಗಿದ್ದವು.
ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನವಾದ ಸೋಮವಾರ ಪಕ್ಷೇತರ ಅಭ್ಯರ್ಥಿಗಳಾದ ನಯೀಮ್ ರೆಹೆಮಾನ್ ಜೈಲರ್ ಮತ್ತು ರಾಜಶೇಖರ ಬೆಳ್ಳಿಗಟ್ಟಿ ನಾಮಪತ್ರ ವಾಪಸ್ ಪಡೆದಿದ್ದಾರೆ. ಇದರಿಂದ ಕ್ಷೇತ್ರದಲ್ಲಿ 13 ಅಭ್ಯರ್ಥಿಗಳು ಚುನಾವಣಾ ಸ್ಪರ್ಧೆಯಲ್ಲಿ ಪಾಲ್ಗೊಂಡಂತಾಗಿದೆ.

ಅಂತಿಮವಾಗಿ ಕಣದಲ್ಲಿ ಉಳಿದವರು:
ಬಾಲಕೃಷ್ಣ ಪಾಟೀಲ್
ಮೊಹಮದ್ ಝಬರೂದ್ ಖತೀಬ್
ನಾಗರಾಜ ಶಿರಾಲಿ
ಸುನೀಲ್ ಪವಾರ್
ಅನಿತಾ ಅಶೋಕ್ ಶೇಟ್
ಅನಂತಕುಮಾರ್ ಹೆಗಡೆ
ನಾಗರಾಜ ಶೇಟ್
ಚಿದಾನಂದ ಎಚ್ ಹರಿಜನ್
ಮಂಜುನಾಥ್ ಸದಾಶಿವ
ಕುಂದಾಬಾಯಿ ಗಣಪತಿ ಪರುಲೇಕರ್

ಆನಂದ ಆಸ್ಕೋಟಿಕರ್

ನಾಗರಾಜ್ ನಾಯ್ಕ
ಸುಧಾಕರ ಜೋಗಳೇಕರ್

Related Articles

Back to top button