Latest

ಕಾರವಾರ ದೋಣಿ ದುರಂತ: ಬಾಲಕಿಯ ಮೃತದೇಹ ಪತ್ತೆ, ಸತ್ತವರ ಸಂಖ್ಯೆ 15ಕ್ಕೇರಿಕೆ

   ಪ್ರಗತಿವಾಹಿನಿ ಸುದ್ದಿ, ಕಾರವಾರ
ಕೂರ್ಮಗಡ ಜಾತ್ರೆ ವೇಳೆ ಸಂಭವಿಸಿದ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ಶಿಗ್ಗಾವಿಯ ಬಾಲಕಿ ಕೀರ್ತಿ (೭ ) ಶವ ಪತ್ತೆಯಾಗಿದ್ದು, ಮೃತರಾದವರ ಸಂಖ್ಯೆ 15ಕ್ಕೇರಿದೆ. 
ಬುಧವಾರ ಸಂಜೆ ಅಂಕೋಲಾ ತಾಲೂಕಿನ ಬೇಲೇಕೇರೆ ಸಮುದ್ರ ವ್ಯಾಪ್ತಿಯಲ್ಲಿ ಬಾಲಕಿ ಶವ ಪತ್ತೆಯಾಗಿದೆ. ಇನ್ನೋರ್ವ ಬಾಲಕ ಸಂದೀಪನಿಗಾಗಿ‌ ಶೋಧ ಕಾರ್ಯಾಚರಣೆ ಮುಂದುವರೆದಿದೆ. 
ಸೋಮವಾರ ಇಲ್ಲಿನ ಕೂರ್ಮಗಡ ನಡುಗಡ್ಡೆಯ ನರಸಿಂಹ ದೇವರ ಜಾತ್ರೆ ಮುಗಿಸಿ ವಾಪಸಾಗುತ್ತಿದ್ದ ವೇಳೆ ಪಾತಿ ದೋಣಿಯೊಂದು ಮುಳುಗಿ ಅದರಲ್ಲಿದ್ದ 35 ಜನರ ಪೈಕಿ 16 ಜನ ನೀರುಪಾಲಾಗಿದ್ದರು. ಮುಳುಗಿದವರಲ್ಲಿ ಶಿಗ್ಗಾವಿ ಮೂಲದ ಒಂದೇ ಕುಟುಂಬದ 9 ಜನ ಸೇರಿದ್ದರು. ಮಂಗಳವಾರ ಸಂಜೆಯವರೆಗೆ 14 ಮೃತದೇಹಗಳು ದೊರೆತಿದ್ದವು. ಬಾಲಕ ಸಂದೀಪನಿಗಾಗಿ‌ ಗುರುವಾರ ಶೋಧ ಕಾರ್ಯಾಚರಣೆ ಮುಂದುವರೆಯಲಿದೆ.

Related Articles

Back to top button