Latest

ಜೈಟ್ಲೆ ಅನಾರೋಗ್ಯ: ಹಣಕಾಸು ಖಾತೆ ಪಿಯೂಷ್ ಗೋಯಲ್ ಹೆಗಲಿಗೆ

ಪ್ರಗತಿವಾಹಿನಿ ಸುದ್ದಿ, ನವದೆಹಲಿ

ಕೇಂದ್ರ ಹಣಕಾಸು ಖಾತೆ ಸಚಿವ ಅರುಣ ಜೈಟ್ಲೆ ಅನಾರೋಗ್ಯದಿಂದ ಅಮೇರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಹಣಕಾಸು ಖಾತೆಯ ಹೊಣೆಯನ್ನು ಸಚಿವ ಪಿಯೂಷ್ ಗೋಯಲ್ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ. 

ಫೆ.1ರಂದು ಈ ವರ್ಷದ ಕೇದ್ರ ಬಜೆಟ್ ನ್ನು ಗೋಯಲ್ ಅವರೇ ಮಂಡಿಸುವ ಸಾಧ್ಯತೆ ಇದೆ. ಪ್ರಧಾನಿ ನರೇಂದ್ರ ಮೋದಿಯವರ ಶಿಫಾರಸ್ಸಿನ ಮೇರೆಗೆ ರಾಷ್ಟ್ರಪತಿಗಳು ಈ ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದು, ಅರುಣ ಜೈಟ್ಲೆ ಖಾತೆ ರಹಿತ ಸಚಿವರಾಗಿ ಮುಂದುವರಿಯಲಿದ್ದಾರೆ. 

ಕ್ಯಾನ್ಸರ್ ನಿಂದ ಬಳಲುತ್ತಿರುವ ಜೈಟ್ಲೆ ಅಮೇರಿಕಾಕ್ಕೆ ತೆರಳಿದ್ದಾರೆ. ಅಲ್ಲಿ ಅವರಿಗೆ ಚಿಕಿತ್ಸೆ ಮುಂದುವರಿದಿದ್ದು, ವಾಪಸ್ ಬಂದ ನಂತರ ಹಣಕಾಸು ಖಾತೆಯನ್ನು ಪುನಃ ವಹಿಸಿಕೊಳ್ಳುವರು. 

Home add -Advt

Related Articles

Back to top button