Latest

ವಿಟಿಯು ಇಬ್ಬಾಗಿಸದಂತೆ  ಒತ್ತಾಯಸಿ  ಕರ್ನಾಟಕ ನವ ನಿರ್ಮಾಣ ಪಡೆ ಪ್ರತಿಭಟನೆ

 ಪ್ರಗತಿವಾಹಿನಿ ಸುದ್ದಿ, ರಾಯಬಾಗ :
ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ಇಬ್ಬಾಗಿಸಲು ಹೊರಟಿರುವ ರಾಜ್ಯ ಸರಕಾರದ ನಿರ್ಣಯ ಖಂಡನೀಯ, ಕೂಡಲೇ ಸರಕಾರ ವಿಟಿಯು ಬಗ್ಗೆ ತೆಗೆದುಕೊಂಡ ನಿರ್ಣಯವನ್ನು ರದ್ದು ಪಡೆಸಬೇಕೆಂದು ಒತ್ತಾಯಿಸಿ ಕರ್ನಾಟಕ ನವ ನಿರ್ಮಾಣ ಪಡೆ ರಾಯಬಾಗ ತಾಲೂಕು ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು .
ಮಂಗಳವಾರ ರಾಯಬಾಗ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ ಕನಪಾ ಕಾರ್ಯಕರ್ತರು, ಯಾವುದೇ ಕಾರಣಕ್ಕೂ ವಿಟಿಯು ವಿಭಜನೆ ಮಾಡಬಾರದು, ವಿಟಿಯು ಅಭಿವೃದ್ಧಿಗೆ ಸರಕಾರ ಅನುದಾನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು. ಕನಪಾ ಮುಖಂಡ ಅರುಣ ಟಕ್ಕನ್ನವರ ಮಾತನಾಡಿ, ವಿಟಿಯು ವಿಭಜಿಸುವ ಸರಕಾರದ ನಿಲುವು ಖಂಡನೀಯ, ಕೂಡಲೇ ರಾಜ್ಯ ಸರಕಾರ ವಿಭಜನೆ ನಿರ್ಣಯ ರದ್ದು ಪಡೆಸಬೇಕು. ಇದು ಉತ್ತರ ಕರ್ನಾಟಕ ಜನತೆಗೆ ನೋವುಂಟು ಮಾಡಿದೆ. ಕುಮಾರ ಸ್ವಾಮಿ ಉತ್ತರ ಕರ್ನಾಟಕದ ಮೇಲೆ ಮಲತಾಯಿ ಧೋರಣೆ ಮುಂದುವರೆಸಿದ್ದಾರೆ ಎಂದು ಆರೋಪಿಸಿದರು.

Related Articles

Back to top button