Latest

ಸಚಿವ ಡಿ.ಕೆ.ಶಿವಕುಮಾರ್ ಗೆ ಬಿಗಿಯಾಗುತ್ತಿದೆ ಐಟಿ ಉರುಳು

 

 

     ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ರಾಜ್ಯ ಜಲಸಂಪನ್ಮೂಲ ಮತ್ತು ಉನ್ನತ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ದಿನದಿಂದ ದಿನಕ್ಕೆ ಐಟಿ ಉರುಳು ಬಿಗಿಯಾಗತೊಡಗಿದೆ.

Home add -Advt

ಕಳೆದ ಒಂದು ವರ್ಷಗಳಿಗಿಂತಲೂ ಹೆಚ್ಚು ಸಮಯದಿಂದ ಶಿವಕುಮಾರ ಅವರ ಆಸ್ತಿಗಳ ತನಿಖೆ ನಡೆಯುತ್ತಿರುವ ಆದಾಯ ತೆರಿಗೆ ಇಲಾಖೆ, ಶಿವಕುಮಾರ ಬಳಿ ಸಾವಿರಾರು ಕೋಟಿ ರೂ. ಬೇನಾಮಿ ಆಸ್ತಿ ಪತ್ತೆಯಾಗಿದೆ ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಈಚೆಗಷ್ಟೆ ಶಿವಕುಮಾರ ಅವರ ತಾಯಿಯ ವಿಚಾರಣೆಯನ್ನು ಕೂಡ ನಡೆಸಲಾಗಿತ್ತು. 

ಶಿವಕುಮಾರ ಅವರು ಘೋಷಿಸಿರುವ ಆಸ್ತಿಗಳಿಗೂ ಆದಾಯಕ್ಕೂ ತಾಳೆಯಾಗುತ್ತಿಲ್ಲ. ಜೊತೆಗೆ ಹಲವಾರು ಜನರ ಹೆಸರಿನಲ್ಲಿ ಬೇನಾಮಿ ಆಸ್ತಿಗಳೂ ಪತ್ತೆಯಾಗಿವೆ. ಈ ಬೇನಾಮಿ ಆಸ್ತಿಗಳನ್ನು ಯಾವುದೇ ಕ್ಷಣದಲ್ಲಿ ವಶಪಡಿಸಿಕೊಳ್ಳಬಹುದು. ಜೊತೆಗೆ ಅವರನ್ನು ಬಂಧಿಸಲೂಬಹುದು ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಶಿವಕುಮಾರ ವಿರುದ್ಧ ನಡೆಯುತ್ತಿರುವ ಆದಾಯ ತೆರಿಗೆ ದಾಳಿ ಮತ್ತು ತನಿಖೆ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೂ ಕಾರಣವಾಗಿದೆ. ಪ್ರಸ್ತುತ ಸರಕಾರದಲ್ಲಿ ಅವರು ಪ್ರಭಾವಿ ಸಚಿವರಾಗಿದ್ದು, ಒಂದು ವೇಳೆ ಬಂಧನವಾದರೆ ದೊಡ್ಡ ಕೋಲಾಹಲ ಸೃಷ್ಟಿಯಾಗಬಹುದು. 

 

Related Articles

Back to top button