Belagavi NewsBelgaum NewsKannada NewsKarnataka News

ಬೆಳಗಾವಿಯಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರ ಪ್ರದೇಶ ವ್ಯಾಪ್ತಿಯಲ್ಲಿ ಸಾರ್ವಜನಿಕ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸಂದರ್ಭಾನುಸಾರವಾಗಿ ಕಾಲಕಾಲಕ್ಕೆ ಆಯ್ದ ಮಾರ್ಗದ ರಸ್ತೆಗಳನ್ನು ಏಕಮುಖ ಸಂಚಾರ ಎಂದು ಪರಿಗಣಿಸಲಾಗಿದೆ. ಈ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಕೊಳ್ಳಲಾಗುತ್ತಿದ್ದು, ಸಾರ್ವಜನಿಕರು ನಗರ ಪ್ರದೇಶದಲ್ಲಿರುವ ಏಕಮುಖ ಸಂಚಾರ ಮಾರ್ಗಗಳ ಬಗ್ಗೆ ಜಾಗೃತರಾಗಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿಕೊಂಡು ಬರುವಂತೆ ಪೊಲೀಸ್ ಇಲಾಖೆ ಕೋರಿದೆ.

ಏಕಮುಖ ಸಂಚಾರ ಮಾರ್ಗಗಳು

1) ಕಿರ್ಲೋಸ್ಕರ ರಸ್ತೆ : ಪಶ್ಚಿಮ ದಿಂದ ಪೂರ್ವ ದಿಕ್ಕಿಗೆ ಸಂಚರಿಸುವುದು.

2) ಕೇಳಕರಬಾಗ ರಸ್ತೆ : ಪಶ್ಚಿಮ ದಿಂದ ಪೂರ್ವ ದಿಕ್ಕಿಗೆ ಸಂಚರಿಸುವುದು.

3) ಅನಸುರಕರ ಗಲ್ಲಿ ರಸ್ತೆ -ಪೂರ್ವ ದಿಂದ ಪಶ್ಚಿಮ ದಿಕ್ಕಿಗೆ ಸಂಚರಿಸುವುದು.

4) ರಾಮದೇವ ಗಲ್ಲಿ ರಸ್ತೆ : ದಕ್ಷಿಣ ದಿಂದ ಉತ್ತರ ದಿಕ್ಕೆಗೆ ಸಂಚರಿಸುವುದು.

5) ನೆಹರು ನಗರ 2ನೇ ಕ್ರಾಸ್ : ಕೆಎಲ್‌ಇ ಆಸ್ಪತ್ರೆ ರಸ್ತೆಯಿಂದ ತಟ್ಟೆ ಇಡ್ಲಿ ಹೊಟೇಲ್ ಮುಖಾಂತರ ಆಜಮ್ ನಗರ ರಸ್ತೆಯನ್ನು ಪೂರ್ವ ದಿಂದ ಪಶ್ಚಿಮ ದಿಕ್ಕಿಗೆ ಸಂಚರಿಸುವುದು.

6) ನೆಹರು ನಗರ 3ನೇ ಕ್ರಾಸ್ : ಆಜಮ್ ನಗರ ಸೇರುವ ನೆಹರು ನಗರ 3ನೇ ಕ್ರಾಸ್ ರಸ್ತೆ ಯಿಂದ ಕೆಎಲ್‌ಇ ರಸ್ತೆ ಸೇರುವ ಮಾರ್ಗ (ಮುಜಾವರ್ ಆರ್ಕೇಡ್ ಬದಿಗೆ) ಪಶ್ಚಿಮ ದಿಂದ ಪೂರ್ವ ದಿಕ್ಕಿಗೆ ಸಂಚರಿಸುವುದು.

7) ಕಲ್ಮಠ ರೋಡ್ : ಉತ್ತರ ದಿಂದ ದಕ್ಷಿಣ ದಿಕ್ಕಿಗೆ ಸಂಚರಿಸುವುದು.

8) ಗಣಪತಿ ಗಲ್ಲಿ : ಪಶ್ಚಿಮ ದಿಂದ ಪೂರ್ವ ದಿಕ್ಕಿಗೆ ಸಂಚರಿಸುವುದು.

ಜೊತೆಗೆ, ಸಾರ್ವಜನಿಕರು ತಮ್ಮ ಮಕ್ಕಳನ್ನು ಶಾಲಾ ವಾಹನ/ಆಟೋರಿಕ್ಷಾಗಳಲ್ಲಿ ಕಳುಹಿಸುವಾಗ ಮಕ್ಕಳ ಹಿತದೃಷ್ಟಿಯ ಬಗ್ಗೆ ಎಚ್ಚರವಹಿಸುವುದು. ಶಾಲಾ ವಾಹನ/ ಆಟೋರಿಕ್ಷಾ ಚಾಲಕರು ನಿಗದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳನ್ನು ಸಾಗಿಸಬಾರದೆಂದು ಹಾಗೂ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿಕೊಂಡು ಬರಬೇಕೆಂದು ಕೊರಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button