Kannada NewsKarnataka NewsLatest
*ಮಹತ್ವದ ಬೆಳವಣಿಗೆ; ಕೆಲ ಇನ್ಸ್ ಪೆಕ್ಟರ್ ಗಳ ವರ್ಗಾವಣೆಗೆ ಏಕಾಏಕಿ ತಡೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಅಚ್ಚರಿ ಬೆಳವಣಿಗೆಯೊಂದರಲ್ಲಿ ರಾಜ್ಯ ಸರ್ಕಾರ ಕೆಲ ಇನ್ಸ್ ಪೆಕ್ಟರ್ ಗಳ ವರ್ಗಾವಣೆಗೆ ತಡೆ ನೀಡಿದೆ. ನಿನ್ನೆ ವರ್ಗಾವಣೆಯಾಗಿದ್ದ ಕೆಲ ಇನ್ಸ್ ಪೆಕ್ಟರ್ ಗಳ ವರ್ಗಾವಣೆ ಆದೇಶಕ್ಕೆ ತಡೆ ನೀಡಲಾಗಿದೆ.
ನಿನ್ನೆ 211 ಇನ್ಸ್ ಪೆಕ್ಟರ್ ಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಇಂದು ಬೆಳಿಗ್ಗೆ ಕೆಲ ಇಸ್ ಪೆಕ್ಟರ್ ಗಳ ವರ್ಗಾವಣೆಗೆ ರಾಜ್ಯ ಸರ್ಕಾರ ದಿಢೀರ್ ತಡೆ ನೀಡಿದೆ.
211 ಇನ್ಸ್ ಪೆಕ್ಟರ್ ಗಳ ವರ್ಗಾವಣೆಯಲ್ಲಿ ಇಂದು 11 ಇನ್ಸ್ ಪೆಕ್ಟರ್ ಗಳ ವರ್ಗಾವಣೆಗೆ ತಡೆ ನೀಡಿದೆ.
ವರ್ಗಾವಣೆ ತಡೆ ಯಾರು ಯಾರಿಗೆ?
ರವಿ ಗೌಡ ಬಿ- ಯಶವಂತಪುರ ಟ್ರಾಫಿಕ್
ಧನಂಜಯ್-ಯಶವಂತಪುರ ಲಾ ಆಂಡ್ ಆರ್ಡರ್
ಲಕ್ಷ್ಮಣ ಜೆ- ನಂದಿನಿ ಲೇಔಟ್
ಅಶ್ವತ್ಥ ಗೌಡ ಜ್ಞಾನಭಾರತಿ ಪೊಲೀಸ್ ಠಾಣೆ
ಗೋವಿಂದರಾಜು-ಪೀಣ್ಯ ಪೊಲೀಸ್ ಠಾಣೆ
ಕೃಷ್ಣ ಕುಮಾರ್- ಬೆಂಗಳೂರು ಪೊಲೀಸ್ ಠಾಣೆ
ಜಗದೀಶ್-ಕೆ.ಎಸ್.ಲೇಔಟ್ ಠಾಣೆ
ವಜ್ರಮುನಿ-ಕೆ.ಆರ್.ಮಾರ್ಕೆಟ್
ರವಿಕುಮಾರ್-ಪುಟ್ಟೇನಹಳ್ಳಿ
ಅನೀಲ್ ಕುಮಾರ್-ಮಲ್ಲೇಶ್ವರಂ
ಎಡ್ವಿನ್ ಪ್ರದೀಪ್-ಜಿಗಣಿ




