ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಆತ್ಮಹತ್ಯೆಯನ್ನು ಕೊಲೆ ಎಂದು ವದಂತಿ ಹರಡಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಹಿರೇಬಾಗೇವಾಡಿ ಎಪಿಎಂಸಿಯಲ್ಲಿ ಗೋಕಾಕ ತಾಲೂಕಿನ ಶಿವಕುಮಾರ ಎನ್ನುವ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದ. ಆತ ಬಜರಂಗ ದಳದ ಕಾರ್ಯಕರ್ತನಾಗಿದ್ದ. ಈ ಸಾವಿನ ಬಗ್ಗೆ ಹಿಂದೂ ಸಂಘಟನೆಗಳು ಸಂಶಯ ವ್ಯಕ್ತಪಡಿಸಿ ತನಿಖೆಗೆ ಆಗ್ರಹಿಸಿದ್ದವು. ಇದನ್ನು ಕೊಲೆ ಎನ್ನುವಂತೆ ಬಿಂಬಿಸಿ, ಎರಡು ಕೋಮುಗಳ ಮಧ್ಯೆ ವೈಮನಸ್ಸು ಹುಟ್ಟುವ ರೀತಿಯಲ್ಲಿ ವಾಟ್ಸಪ್ ಸಂದೇಶ ಹಾಕಲಾಗಿತ್ತು.
ಈ ಹಿನ್ನೆಲೆಯಲ್ಲಿ ಕಂಕನವಾಡಿಯ ಅರ್ಜುನ ಮುತ್ತೆಪ್ಪ ಬಸರ್ಗಿ ಮತ್ತು ಹಿರೇಕುಂಬಿಯ ಫಕೀರಪ್ಪ ರಮೇಶ ತಳವಾರ ಅವರನ್ನು ಬಂಧಿಸಲಾಗಿದೆ.