Latest

ವಾಟ್ಸಪ್ ಮೂಲಕ ವದಂತಿ ಹರಡಿದ ಇಬ್ಬರ ಬಂಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಆತ್ಮಹತ್ಯೆಯನ್ನು ಕೊಲೆ ಎಂದು ವದಂತಿ ಹರಡಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. 

ಹಿರೇಬಾಗೇವಾಡಿ ಎಪಿಎಂಸಿಯಲ್ಲಿ ಗೋಕಾಕ ತಾಲೂಕಿನ ಶಿವಕುಮಾರ ಎನ್ನುವ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದ. ಆತ ಬಜರಂಗ ದಳದ ಕಾರ್ಯಕರ್ತನಾಗಿದ್ದ. ಈ ಸಾವಿನ ಬಗ್ಗೆ ಹಿಂದೂ ಸಂಘಟನೆಗಳು ಸಂಶಯ ವ್ಯಕ್ತಪಡಿಸಿ ತನಿಖೆಗೆ ಆಗ್ರಹಿಸಿದ್ದವು. ಇದನ್ನು ಕೊಲೆ ಎನ್ನುವಂತೆ ಬಿಂಬಿಸಿ, ಎರಡು ಕೋಮುಗಳ ಮಧ್ಯೆ ವೈಮನಸ್ಸು ಹುಟ್ಟುವ ರೀತಿಯಲ್ಲಿ ವಾಟ್ಸಪ್ ಸಂದೇಶ ಹಾಕಲಾಗಿತ್ತು. 

ಈ ಹಿನ್ನೆಲೆಯಲ್ಲಿ ಕಂಕನವಾಡಿಯ ಅರ್ಜುನ ಮುತ್ತೆಪ್ಪ ಬಸರ್ಗಿ ಮತ್ತು ಹಿರೇಕುಂಬಿಯ ಫಕೀರಪ್ಪ ರಮೇಶ ತಳವಾರ ಅವರನ್ನು ಬಂಧಿಸಲಾಗಿದೆ.

Home add -Advt

Related Articles

Back to top button