Belagavi NewsBelgaum NewsKannada NewsKarnataka News

*2022ರಲ್ಲಿ ನಡೆದ ಸತೀಶ್ ಕೊಲೆ: ಐವರಿಗೆ ಜೀವಾವದಿ ಶಿಕ್ಷೆ ವಿಧಿಸಿದ ಕೋರ್ಟ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ತಾಲೂಕಿನ ಗೌಂಡವಾಡ ಗ್ರಾಮದಲ್ಲಿನ ದೇವಸ್ಥಾನದ ಜಮೀನನ್ನು ಕೆಲ ಭೂಗಳ್ಳರು ಒತ್ತವರಿ ಮಾಡಿಕೊಂಡಿದ್ದರು.‌ ಇದನ್ನು ವಿರೋಧಿಸಿದ ಅದೇ ಗ್ರಾಮದ ಸತೀಶ್ ಪಾಟೀಲ್ ಎಂಬಾತನನ್ನು ಕೊಲೆ ಮಾಡಲಾಗಿತ್ತು. ಈ ಪ್ರಕರಣದ ತೀರ್ಪು ಇಂದು ಹೊರ ಬಿದ್ದಿದೆ. 

ಗೌಂಡವಾಡ ಗ್ರಾಮದ ಸತೀಶ್ ಪಾಟೀಲ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬೆಳಗಾವಿ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲ ವಿಚಾರಣೆ ನಡೆಸಿ  ಐವರಿಗೆ ಜೀವಾವಧಿ ಶಿಕ್ಷೆ ಹಾಗೂ ನಾಲ್ವರಿಗೆ ಒಂದು ವರ್ಷ ಕಠಿಣ ಶಿಕ್ಷೆ ವಿಧಿಸಿ ಇಂದು ತೀರ್ಪು ಪ್ರಕಟಿಸಿದೆ.

Home add -Advt

ಸತೀಶ್ ಪಾಟೀಲ್ ಅವರನ್ನು 2022ರಲ್ಲಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಗೌಂಡವಾಡದ ಒಟ್ಟು 25 ಜನ ಭಾಗಿ ಆಗಿದ್ರು, ಆದರೆ ಇದರಲ್ಲಿ 9 ಜನ ಆರೋಪಿಗಳನ್ನು ಬಂಧಿಸಿ ಈ ಪ್ರಕರಣದಲ್ಲಿ ಕಾಕತಿ ಪೊಲೀಸರು ದೋಷಾರೋಪಣ ಪಟ್ಟಿ ಸಿದ್ದ ಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಹತ್ಯೆ ಪ್ರಕರಣದ ವಿಚಾರಣೆ ನಡೆಸಿ, ವಾದ ಪ್ರತಿವಾದ ಆಲಿಸಿದ ನಂತರ ನ್ಯಾಯಾಧೀಶರು ಜಾಯಪ್ಪ ನೀಲಜಕರ (50), ಆನಂದ ಕುಟ್ರೆ (60), ಶಶಿಕಲಾ ಕುಟ್ರೆ (50), ಮಹಾಂತೇಶ ನಿಲಜಕರ(35), ಅರ್ನವ್ ಕುಟ್ರೆ (32) ಎಂಬುವವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.  

Related Articles

Back to top button