
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮಾರಕ ಕಾಯಿಲೆಯಿಂದ ಬಳಲುತ್ತಿದ್ದ ಮಾರಿಹಾಳದ ಯುವಕನ ಚಿಕಿತ್ಸೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 3 ಲಕ್ಷ ರೂ. ಮಂಜೂರಾಗಿದೆ.
ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರು ಈ ಸಂಬಂಧ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿಕೊಂಡಿದ್ದರು.
ಮಾರಿಹಾಳ ಗ್ರಾಮದ 31 ವರ್ಷದ ವಿಜಯ ಮ ಅಲ್ಲಯ್ಯನವರಮಠ ಎನ್ನುವ ಯುವಕ ಮಾರಕ ಕಾಯಿಲೆಯ ಸರ್ಜರಿ ಚಿಕಿತ್ಸೆಯನ್ನು ಬೆಳಗಾವಿಯ ಕೆಎಲ್ಇ ಎಸ್ ಆಸ್ಪತ್ರೆಯಲ್ಲಿ ಮಾಡಿಸಿಕೊಂಡಿದ್ದರು. ಇದಕ್ಕಾಗಿ ಸುಮಾರು 5.20 ಲಕ್ಷ ರೂ. ಖರ್ಚಾಗಿತ್ತು. ತೀರಾ ಬಡಕುಟುಂಬದವರಾದ ವಿಜಯ್ ಗೆ ಚಿಕಿತ್ಸೆ ವೆಚ್ಚ ಭರಿಸುವ ಶಕ್ತಿ ಇರಲಿಲ್ಲ. ಹಾಗಾಗಿ ಅವರು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದರು.

ಮುಖ್ಯಮಂತ್ರಿಗಳು ಶಾಸಕಿಯ ಮನವಿ ಪತ್ರದ ಮೇಲೆಯೇ 3 ಲಕ್ಷ ರೂ. ಗಳನ್ನು ಬಿಡುಗಡೆ ಮಾಡುವುದಾಗಿ ಬರೆದು ಸಹಿ ಹಾಕಿದ್ದಾರೆ.