Kannada NewsKarnataka NewsNational

*ಒಬ್ಬನನ್ನು ರಕ್ಷಿಸಲು ಹೋಗಿ 8 ಜನರ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಬನಾಸ್ ನದಿಯಲ್ಲಿ 11 ಜನ ಯುವಕರ ತಂಡ ಈಜಲೆಂದು ಇಳಿದಿದ್ದಾರೆ. ಈ ವೇಳೆ ಯುವಕ ಈಜಲು ಆಗದೇ ಒದ್ದಾಡಿದ್ದಾನೆ. ಇದನ್ನು ಕಂಡ ಉಳಿದ ಸ್ನೇಹಿತರು ಆತನನ್ನು ಕಾಪಾಡಲು ಮುಂದಾಗಿದ್ದಾರೆ.

ಈ ವೇಳೆ ಕಾಲು ಜಾರಿ ಎಲ್ಲರೂ ಒಬ್ಬರ ಹಿಂದೆ ಒಬ್ಬರಂತೆ ನೀರಿಗೆ ಬಿದ್ದಿದ್ದಾರೆ. ಈ ವೇಳೆ 8 ಜನ ಸಾವನ್ನಪ್ಪಿರುವ ಘಟನೆ ನಡೆದಿದೆ.

25 ರಿಂದ 30 ವರ್ಷದ ಒಳಗಿನ ಸುಮಾರು 11 ಯುವಕರ ತಂಡ ಜೈಪುರದಿಂದ ಟೊಂಕ್ ಜಿಲ್ಲೆಗೆ ಪಿಕ್ನಿಕ್‌ಗಾಗಿ ಬಂದಿದ್ದರು. ಆಗ ಯುವಕರು ರಾಜಸ್ಥಾನದ ಟೊಂಕ್ ಜಿಲ್ಲೆಯ ಬನಾಸ್ ನದಿಯಲ್ಲಿ ಈಜಲು ಹೋದಾಗ ಈ ಘಟನೆ ನಡೆದಿದೆ.

ಈ ಘಟನೆಯಲ್ಲಿ ಎಂಟು ಯುವಕರು ಸಾವನ್ನಪ್ಪಿದ್ದು, ಮೂವರನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆರೋಗ್ಯ ಸ್ಥಿರವಾಗಿದೆ ಎಂದು ವರದಿಯಾಗಿದೆ. 

Home add -Advt

Related Articles

Back to top button