Latest

*ಭೀಕರ ಕಾರು ಅಪಘಾತ; ಮದುವೆ ಸಡಗರದಲ್ಲಿದ್ದ ಮೆಸ್ಕಾಂ ಜೆಇ ಸೇರಿ ಇಬ್ಬರು ಸ್ಥಳದಲ್ಲೇ ಸಾವು*

ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ಭೀಕರ ಕಾರು ಅಪಘತಾದಲ್ಲಿ ಮೆಸ್ಕಾಂ ಜೆಇ ಸೇರಿ ಇಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಮಾಕನಹಳ್ಳಿ ಬಳಿ ನಡೆದಿದೆ.

ಮೆಸ್ಕಾಂ ಜೆಇ ಕಿರಣ್ (32) ಹಾಗೂ ನಾಗರಾಜ್ (49) ಮೃತರು. ಮೃತ ಕಿರಣ್ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಮೂಲದವರಾಗಿದ್ದು, ಫೆ.8ರಂದು ವಿವಾಹ ನಿಶ್ಚಯವಾಗಿತ್ತು. ಇನ್ನೋರ್ವ ಮೃತ ನಾಗರಾಜ್ ಅಜ್ಜಂಪುರ ತಾಲೂಕಿನವರಾಗಿದ್ದಾರೆ.

ವಿವಾದ ಸಡಗರದಲ್ಲಿದ್ದ ಮೆಸ್ಲಾಂ ಜೆಇ ಕಿರಣ್ ಕಾರು ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ಕಾರು ಚಿಕ್ಕಮಗಳೂರಿನ ಮಾಕನಹಳ್ಳಿ ಬಳಿ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಹೊಡೆದಿದೆ. ದುರಂತದಲ್ಲಿ ಕಿರಣ್ ಹಾಗೂ ನಾಗರಾಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

*ಭೀಕರ ಅಪಘಾತ; ವಿದ್ಯಾರ್ಥಿನಿ ಸ್ಥಳದಲ್ಲೇ ದುರ್ಮರಣ*

Home add -Advt

https://pragati.taskdun.com/biketipperaccidentstudent-death/

Related Articles

Back to top button