LatestUncategorized

*ಏಯ್ ಮಂತ್ರಿಗಳೇ ನಿಂತ್ಕೊಳ್ರೀ… ನಾನು ಕ್ಷೇತ್ರದ ಸಂಸದ ನಮಗೆ ಪ್ರೋಟೋಕಾಲ್ ಇಲ್ವಾ; ಸಚಿವ ಅಶ್ವತ್ಥ ನಾರಾಯಣ ವಿರುದ್ಧ ಡಿ.ಕೆ.ಸುರೇಶ್ ಆಕ್ರೋಶ*

 

ಪ್ರಗತಿವಾಹಿನಿ ಸುದ್ದಿ; ರಾಮನಗರ: ರಾಮನಗರದಲ್ಲಿ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದ ವೇಳೆ ಸಂಸದ ಡಿ.ಕೆ.ಸುರೇಶ್ ಹಾಗೂ ಸಚಿವ ಅಶ್ವತ್ಥನಾರಾಯಣ ನಡುವೆ ಮಾತಿನ ಚಕಮಕಿ ನಡೆದಿದ್ದು, ವೇದಿಕೆಯ ಕೆಳಗೆ ಸಾರ್ವಜನಿಕರ ಸಮ್ಮುಖದಲ್ಲೇ ಇಬ್ಬರು ಜನಪ್ರತಿನಿಧಿಗಳು ಜಗಳಕ್ಕಿಳಿದ ಘಟನೆ ನಡೆದಿದೆ.

ಸಂಸದ ಡಿ.ಕೆ.ಸುರೇಶ್ ಆಗಮನಕ್ಕೂ ಮುನ್ನವೇ ಆಸ್ಪತ್ರೆ ಉದ್ಘಾಟನೆ ನೆರವೇರಿದ್ದು, ಕಾರ್ಯಕ್ರಮದ ವೇದಿಕೆಗೆ ಸಚಿವರಾದ ಅಶ್ವತ್ಥನಾರಾಯಣ, ಸಚಿವ ಡಾ.ಸುಧಾಕರ್ ತೆರಳುತ್ತಿದ್ದ ವೇಳೆ ಹಿಂದೆ ಬಂದ ಸಂಸದ ಡಿ.ಕೆ.ಸುರೇಶ್, ಏಯ್ ಮಂತ್ರಿಗಳೇ ನಿಂತ್ಕೊಳ್ರೀ…ನಮಗೇನು ಪ್ರೋಟೋಕಾಲ್ ಇಲ್ವಾ? ನಮ್ಮನ್ನು ಆಹ್ವಾನಿಸದೇ ಆಸ್ಪತ್ರೆ ಉದ್ಘಾಟನೆಗೆ ಹೊರಟಿದ್ದೀರಾಲ್ಲಾ? ಇದೇನು ಬಿಜೆಪಿ ಕಾರ್ಯಕ್ರಮನಾ? ಸರ್ಕಾರದ ಕಾರ್ಯಕ್ರಮ ಎಂದು ತರಾಟೆಗೆ ತೆಗೆದುಕೊಂಡರು.

ಈ ವೇಳೆ ಸಚಿವ ಅಶ್ವತ್ಥನಾರಾಯಣ ನಿಮಗೂ ಆಹ್ವಾನ ಕೊಟ್ಟಿದ್ದೇವಲ್ಲ, ಈಗ ಬಂದಿದ್ದೀರಲ್ಲ ಬನ್ನಿ ಇಲ್ಲಿ ಜಗಳ ಯಾಕೆ ಎಂದು ಪ್ರಶ್ನಿಸಿದ್ದಾರೆ. ನಾನು ಇ ಕ್ಷೇತ್ರದ ಸಂಸದ ಶಿಷ್ಠಾಚಾರ ಬೇಡ್ವಾ? ಸಚಿವರಿಬ್ಬರಿಗೂ ಅಷ್ಟೂ ಗೊತ್ತಾಗಲ್ವಾ? ಯಾರ್ರಿ ಸಿಇಒ, ಡಿಸಿ? ಪ್ರೋಟೋಕಾಲ್ ಗೊತ್ತಿಲ್ವಾ? ಮೊದಲೇ ಕಾರ್ಯಕ್ರಮ ನಿಗದಿ ಮಾಡಿ ಇಂದು ನಡೆಯುವ ಕಾರ್ಯಕ್ರಮಕ್ಕೆ ನಿನ್ನೆ ರಾತ್ರಿ ಆಹ್ವಾನ ಪತ್ರಿಕೆ ಕೊಟ್ಟಿದ್ದಿರಾ? ಏನು ಕಟಾಚಾರಕ್ಕಾ? ನೀವು ಒಬ್ಬ ಜಿಲ್ಲಾ ಉಸ್ತುವಾರಿ ಸಚಿವರಾಗಿ ಪ್ರೋಟೋ ಕಾಲ್ ಇಲ್ವಾ? ಆಸ್ಪತ್ರೆಗೆ ಅಡಿಗಲ್ಲು ಹಾಕಿದ್ದು ನಾನು ಈಗ ಉದ್ಘಾಟನೆ ವೇಳೆ ಬಿಜೆಪಿ ಕಾರ್ಯಕರಮದಂತೆ ಬಿಂಬಿಸಿಕೊಳ್ಳುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.

ಇದಕ್ಕೆ ಉತ್ತರಿಸಿದ ಸಚಿವ ಅಶ್ವತ್ಥನಾರಾಯಣ ನಾವೇನು ಕಾರ್ಯಕ್ರಮಕ್ಕೆ ಬರಬೇಡಿ ಅಂತ ನಾವು ಹೇಳಿಲ್ಲಾ. ಕಾರ್ಯಕ್ರಮ ಮಾಡೋಣ ಬನ್ನಿ ಆಮೇಲೆ ಮಾತಾಡೋಣ ಎಂದು ಹೇಳಿದರು. ಗರಂ ಆದ ಡಿ.ಕೆ ಸುರೇಶ್ ನೋಡ್ರಿ ಈ ಜಿಲ್ಲಾಸ್ಪತ್ರೆ ನೀವು ಮಾಡಿದ್ದಲ್ಲ, ನಾವು ಮಾಡಿದ್ದು. ಇದನ್ನ ನಿಮ್ಮ ಕಾರ್ಯಕ್ರಮದಂತೆ ತೋರಿಸುವುದು ಬೇಡ ಎಂದು ವಾಗ್ದಾಳಿ ನಡೆಸಿದರು. ಒಟ್ಟಾರೆ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮ ಸಂಸದರು-ಸಚಿವರ ಜಟಾಪಟಿಗೆ ಕಾರಣವಾಗಿದೆ.

*ರಾಜಹಂಸಗಡ ಕೋಟೆಯಲ್ಲಿ ಬೃಹತ್ ಶಿವಾಜಿ ಪ್ರತಿಮೆ ಅನಾವರಣ ಮಾಡಿದ ಸಿಎಂ*

https://pragati.taskdun.com/belagavirajahasagadashivaji-statuecm-basavaraj-bommai/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button