Kannada NewsKarnataka News

ರಾಯಬಾಗ ತಾಲೂಕಿನಲ್ಲಿ ವಿವಿಧೆಡೆ ಬಿಜೆಪಿ ಪರ ಡಾ. ಪ್ರಭಾಕರ ಕೋರೆ ಚುನಾವಣಾ ಪ್ರಚಾರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ನಿಮಿತ್ತ ರಾಯಬಾಗ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದುರ್ಯೋಧನ ಐಹೊಳೆ ಅವರ ಪರವಾಗಿ ಕೆಎಲ್ಇ ಸಂಸ್ಥೆಯ  ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ಡಾ.ಪ್ರಭಾಕರ ಕೋರೆ  ಪ್ರಚಾರ ನಡೆಸಿದರು.

ರಾಯಬಾಗ ತಾಲೂಕಿನ ನಂದಿಕುರಳಿ, ಯಡ್ರಾವ, ಮೇಕಹಳ್ಳಿ, ಕೆಂಪಟ್ಟಿ, ನಸಲಾಪುರ, ಬಾವನಸೌಂದತ್ತಿ, ಹಳೇ ದಿಗ್ಗೇವಾಡಿ, ಬಿರಡಿ, ಮಾಯಕ್ಕ ಚಿಂಚಲಿ ಮುಂತಾದ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದ ಅವರು ಬಿಜೆಪಿಗೆ ಮತ ನೀಡಲು ಜನತೆಗೆ  ಕೇಳಿಕೊಂಡರು.

ಈ ಸಂದರ್ಭಗಳಲ್ಲಿ  ರಾಯಬಾಗ  ಮತಕ್ಷೇತ್ರದ  ಎಂಎಲ್ಎ ಅವರಾದ  ದುರ್ಯೋಧನ ಐಹೊಳೆ,  ಬಿಹಾರದ ಶಾಸಕ ಸಂಜೀವ ಚೌರಾಸಿಯಾ ಚಿದಾನಂದ ಬಸವಪ್ರಭು ಕೋರೆ ಸಹಕಾರ ಸಕ್ಕರೆ ಕಾರ್ಖಾನೆಯ ಮಾಜಿ ಅಧ್ಯಕ್ಷ ಭರತೇಶ ಬನವಣೆ,   ಚೌಗೊಂಡ ಪಾಟೀಲ್ ಹಾಗೂ ತಾಲೂಕು ಪಂಚಾಯಿತಿ ಸದಸ್ಯ ತುಕಾರಾಮ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

Home add -Advt
https://pragati.taskdun.com/demand-to-name-belagavi-railway-station-as-dr-shivabasava-swamini-station/
https://pragati.taskdun.com/amit-shah-met-harihar-veerashaiva-panchamasali-peethadhipati-vachanananda-shri/
https://pragati.taskdun.com/quick-relief-to-problems-of-corruption-price-rise-unemployment-vote-for-congress-and-bring-peoples-government-to-power-in-the-state-lakshmi-hebbalkar/

Related Articles

Back to top button