Kannada NewsKarnataka NewsLatestPoliticsUncategorized

ಪೇ ಕಮಿಷನ್‌, ಪೇ ಮಿನಿಸ್ಟರ್‌, ಪೇ ಸಿಎಂ ಆಗದಂತೆ ಗ್ಯಾರಂಟಿ ಜಾರಿ – ಡಿಸಿಎಂ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಯಾವುದೇ ಪೇ ಕಮಿಷನ್‌, ಪೇ ಮಿನಿಸ್ಟರ್‌, ಪೇ ಸಿಎಂ ಆಗದಂತೆ ಈ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ತಿಳಿಸಿದ್ದಾರೆ.

ವಿಧಾನಪರಿಷತ್ತಿನಲ್ಲಿ ಗುರುವಾರ ಅವರು ಮಾತನಾಡಿದರು.

ಕೋಟಾ ಶ್ರೀನಿವಾಸ್‌ ಪೂಜಾರಿ ಅವರ ಅಭಿಮಾನಿ ನಾನು, ಈ ಪರಿಷತ್ತಿನ ಘನತೆ ಹೇಗಿತ್ತು ಎಂದರೆ ಬಂಗಾರಪ್ಪ ಅವರ ಕಾಲದಲ್ಲಿ ಮಂತ್ರಿಯಾಗಿ ಬಂದವನು. ಎಚ್‌.ಕೆ.ಪಾಟೀಲ್‌, ಕಲ್ಮನ್‌ಕರ್‌, ಎ.ಕೆ.ಸುಬ್ಬಯ್ಯ, ಎಂಸಿ ನಾಣಯ್ಯ ಇದ್ದರು. ಎರಡನೇ ಹಾಗೂ ಮೂರನೇ ದರ್ಜೆ ಲಿಕ್ಕರ್‌ ಕುರಿತು ಎಂಸಿ.ನಾಣಯ್ಯ ಅವರ ಮಾತನ್ನು ಕೇಳಿ ಎಸ್‌.ಎಂ.ಕೃಷ್ಣ ಅವರು ಈ ಲಿಕ್ಕರ್‌ಗಳನ್ನ ಬ್ಯಾನ್‌ ಮಾಡುವುದಾಗಿ ಹೇಳಿದರು.

ಹಿರಿಯರ ಮನೆ ಇದು, 33 ವರ್ಷ ಆಯಿತು. ಇಲ್ಲಿಗೆ ಬಂದು ಇದರ ಘನತೆಯನ್ನು ಕಾಪಾಡಬೇಕು. ನಮ್ಮ ಪಂಚ ಗ್ಯಾರಂಟಿಗಳನ್ನ ಮನತುಂಬಿ ಒಪ್ಪಿಕೊಂಡಿದ್ದೀರಿ ಧನ್ಯವಾದಗಳು. ನಾನು ಸಮಾಧಾನದಿಂದ ನಿಮ್ಮ ಮಾತನ್ನು ಆಲಿಸಿದ್ದೇನೆ. ಅರ್ಚಕಸ್ಯ ಪ್ರಭಾಯನ ಶಿಲಾಭೂತಿ ಶಂಕರಃ “ಅರ್ಚಕನ ಪ್ರಭಾವದಿಂದ ಶಿಲೆ ಕೂಡ ಶಂಕರನನ್ನು ಕಾಣಬಹುದು”

ಈ ರಾಜ್ಯದ ಜನ ನಮಗೆ ಆಶೀರ್ವಾದ ಮಾಡಿದ್ದಾರೆ. ಈ ಹಿಂದಿನ ಸರ್ಕಾರದ ಎಲ್ಲಾ ಆಚಾರ- ವಿಚಾರಗಳನ್ನ ನಾವು ಪ್ರಚಾರ ಮಾಡಿದಿವಿ, ಅದರ ಬಗ್ಗೆ ಮಾತನಾಡುವುದಿಲ್ಲ. ನಮ್ಮ ಪಂಚ ಗ್ಯಾರಂಟಿಗಳನ್ನ ರಾಜ್ಯಪಾಲರ ಭಾಷಣದ ಮೂಲಕ ತಿಳಿದುಕೊಳ್ಳಬಹುದು. ಬೇರೆ ಚರ್ಚೆಗೆ ಸಂದರ್ಭವಲ್ಲ ಎಂದು ಹೇಳಿದರು.

ಯಾಕೆ ಈ ಯೋಜೆನಗಳನ್ನು ತಂದೆವು ಎಂದರೆ ಪ್ರತಿ ದಿನ PICK POCKET ಆಗ್ತಾ ಇತ್ತು. 60 ರೂಪಾಯಿ ಇದ್ದ ಪೆಟ್ರೋಲ್‌ ಡಿಸೇಲ್‌ 100 ರೂಪಾಯಿ ಆಗಿ ಗ್ಯಾಸ್‌ 1 ಸಾವಿರ ರೂಪಾಯಿ ಆಗಿ, ಉಪ್ಪು, ಮೊಸರಿಗೂ GST ಹಾಕಿ ಸಾಕಷ್ಟು ಕಷ್ಟ ಆಗುತ್ತಿತ್ತು. ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದರು ಜನ ಈ ಕಾರಣಕ್ಕೆ ಈ ಪಂಚ ಯೋಜನೆಗಳನ್ನು ಜಾರಿಗೆ ತರುವ ಆಲೋಚನೆ ಬಂದಿತು. ಯಾವುದೇ ಭ್ರಷ್ಟಾಚಾರ ಇಲ್ಲದೇ ಈ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ, ತರಲಾಗುವುದು. ನಿಮ್ಮ ಯಾವುದೇ ಪೇ ಕಮಿಷನ್‌, ಪೇ ಮಿನಿಸ್ಟರ್‌, ಪೇ ಸಿಎಂ ಆಗದಂತೆ ಈ ಯೋಜನೆಗಳನ್ನು ಜಾರಿಗೆ ತರಲಾಗುವುದು. ನೀವು ಯಾವುದೇ ಸಲಹೆ- ಸೂಚನೆಗಳನ್ನು ಕೊಟ್ಟರು ನಾವು ತೆಗೆದುಕೊಳುತ್ತೇವೆ. ಈಗ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆಗೆ ಅವಕಾಶವಿದೆ, ಅದರ ಮೇಲೆ ಮೊದಲು ಚರ್ಚೆಯಾಗಲಿ ಎಂದರು.

ವಿಧಾನ ಪರಿಷತ್ತಿನಲ್ಲಿ ನಡೆದ ಪ್ರಶ್ನೋತ್ತರ ಕಲಾಪದ ವೇಳೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಸದಸ್ಯರ ಪ್ರಶ್ನೆಗಳಿಗೆ ಕೊಟ್ಟ ಉತ್ತರ

ವಿಧಾನಪರಿಷತ್‌ ಸದಸ್ಯರಾದ ಮಧು ಮಾದೇಗೌಡ ಅವರು ಕೇಳಿದ ಪ್ರಶ್ನೆ;

ಕೆಆರ್‌ಎಸ್‌ ಆಣೆಕಟ್ಟಿಗೆ ಯಾವುದೇ ರೀತಿ ಹಾನಿ ಆಗದಂತೆ ಡಿಸ್ನಿ ಲ್ಯಾಂಡ್‌ ಮಾದರಿ ಉದ್ಯಾನವನ ಮಾಡುವಂತೆ ಕೋರಿಕೆ

ಡಿಸಿಎಂ ಉತ್ತರ:

“ಹಿಂದೆ ಕಾಂಗ್ರೆಸ್‌ ಸರ್ಕಾರದ ವೇಳೆಯಲ್ಲೇ ಡಿಸ್ನಿಲ್ಯಾಂಡ್‌ ಮಾದರಿ ಉದ್ಯಾನವನ ಯೋಜನೆ ಬಜೆಟ್‌ನಲ್ಲಿಯೂ ಆಗಿತ್ತು. ಆದರೆ ಕಾರಣಾಂತರಗಳಿಂದ ನಿಂತು ಹೋಗಿತ್ತು.
ಬೆಂಗಳೂರು ಮತ್ತು ಮೈಸೂರು ಭಾಗದಲ್ಲಿ ಯಾವುದೇ ಮನರಂಜನಾತ್ಮಕ ಪಾರ್ಕ್‌ಗಳಿಲ್ಲ, ಗುಂಡುರಾವ್‌ ಅವರ ಕಾಲದಲ್ಲಿ ಒಳ್ಳೆ ಉದ್ಯಾನವನ ಆಯಿತು. ಸರ್ಕಾರದ 198 ಎಕರೆ ಜಮೀನು ಏರಿಯ ಕೆಳಗೆ ಇದೆ, PPP ಮಾದರಿಯಲ್ಲಿ ಉದ್ಯಾನವನ ಮಾಡಬಹುದೇ ಎಂಬುದರ ಕುರಿತು ಆಲೋಚನೆ ಮಾಡಲಾಗುವುದು.

ಕೆ.ಆರ್‌ಎಸ್‌ ಅಣೆಕಟ್ಟಿಗೆ ಯಾವುದೇ ತೊಂದರೆ ಆಗುವುದಿಲ್ಲ, ಅದರಿಂದ ಸ್ವಲ್ಪ ದೂರದಲ್ಲೆ ಉದ್ಯಾನವನ ನಿರ್ಮಾಣ ಮಾಡಲಾಗುವುದು.

ಇದು ಮಧು ಮಾದೇಗೌಡ ಅವರ ಕ್ಷೇತ್ರದ ವ್ಯಾಪ್ತಿಯಲ್ಲೇ ಬರುತ್ತದೆ. ಈ ಯೋಜನೆಯಿಂದ ಸ್ಥಳೀಯ ಉದ್ಯೋಗ ಸೃಷ್ಟಿಯಾಗಬೇಕು, ಹಾಗೂ ಜನರಿಗೆ ಒಳ್ಳೆಯದಾಗಬೇಕು.”

**

ಯು.ಬಿ.ವೆಂಕಟೇಶ್‌ ಅವರು ಕೇಳಿದ ಪ್ರಶ್ನೆ, ಬಸವನಗುಡಿಯಲ್ಲಿ ಇರುವ ಸ್ಕೇಟಿಂಗ್‌ ಟ್ರಾಕ್‌ನಲ್ಲಿ ಖಾಸಗಿಯವರು ಹಣ ಪಡೆದು ವ್ಯವಹಾರ ಮಾಡುತ್ತಿದ್ದಾರೆ. ಬಡ ಮಕ್ಕಳಿಗೆ ಉಪಯೋಗವಾಗುತ್ತಿಲ್ಲ. ಇದನ್ನ ಬಿಬಿಎಂಪಿಯಿಂದ ತೆಗೆದು ಕ್ರೀಡಾ ಇಲಾಖೆಗೆ ನೀಡಬೇಕಾಗಿ ಮನವಿ

ಡಿಸಿಎಂ ಉತ್ತರ:
“ಸುಮಾರು 5.5 ಕೋಟಿ ಖರ್ಚು ಮಾಡಿ ಸ್ಕೇಟಿಂಗ್‌ ರಿಗ್‌ ನಿರ್ಮಾಣ ಮಾಡಲಾಗಿದೆ. 1,510 ಚದರ ಮೀ ಇದೆ. ಯಾವುದೇ ಕಾರಣಕ್ಕೂ ಈ ಟ್ರಾಕ್‌ ಅನ್ನ ಯಾರಿಗೂ ಗುತ್ತಿಗೆ ನೀಡಿಲ್ಲ. ಬಿಬಿಎಂಪಿಯಿಂದ ಕ್ರೀಡಾ ಇಲಾಖೆಗೆ ಹಸ್ತಾಂತರ ಮಾಡುವ ಕುರಿತು ಯೋಚಿಸಲಾಗುವುದು.”

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button