Belagavi NewsBelgaum NewsKannada NewsKarnataka NewsLatest

*ನವಜಾತ ಶಿಶುವಿಗೆ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ ನಡೆಸಿದ KLE ಆಸ್ಪತ್ರೆ ವೈದ್ಯರು*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೇವಲ 16 ದಿನಗಳ ಹಾಗೂ ಎರಡೂವರೆ ಕೆಜಿ ತೂಗುತ್ತಿದ್ದ ನವಜಾತ ಮಗುವೊಂದು ಆಮ್ಲಜನಕ ಭರಿತ ರಕ್ತದ ಕೊರತೆಯಿಂದ ಮೈಬಣ್ಣ ನೀಲಿ ಬಣ್ಣಕ್ಕೆ ತಿರುಗಿ, ತ್ವರಿತ ಹೃದಯ ಬಡಿತದೊಂದಿಗೆ ನಾಡಿಮಿಡಿತವೂ ಕಡಿಮೆಗೊಂಡು ಜೀವನ್ಮರಣದ ನಡುವೆ ಹೋರಾಡುತ್ತಿತ್ತು. ಸತತ 8 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನೆರವೇರಿಸಿ, ಮಗುವಿನ ಪ್ರಾಣ ಉಳಿಸುವಲ್ಲಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಹೃದಯಶಸ್ತ್ರಚಿಕಿತ್ಸಾ ತಜ್ಞವೈದ್ಯರು ಯಶಸ್ವಿಯಾಗಿದ್ದಾರೆ.

ಇದು ಅತ್ಯಂತ ಅಪರೂಪದ ಜನ್ಮತಃ ಹೃದಯ ದೋಷವಾಗಿದ್ದು, ಮಗು ತಾಯಿಯ ಗರ್ಭದಲ್ಲಿರುವಾಗ ಕೆಲವೊಮ್ಮೆ ಕಂಡುಬರುವುದಿಲ್ಲ.
ಆಸ್ಪತ್ರೆಗೆ ಆಗಮಿಸಿದ್ದ ಮಹಾರಾಷ್ಟçದ ಚಂದಗಡ ತಾಲೂಕಿನ ನವಜಾತ ಶಿಶುವನ್ನು ಚಿಕ್ಕಮಕ್ಕಳ ಹೃದಯ ತಜ್ಞವೈದ್ಯರಾದ ಡಾ. ಡ್ಯಾನಿಶ ಮೆಮನ್ ಅವರು ಪರೀಕ್ಷಿಸಿದಾಗ ಹೃದಯದ ಮುಖ್ಯ ರಕ್ತನಾಳವು ಅದಲುಬದಲಾಗಿ ಆಮ್ಲಜನಕಭರಿತ ರಕ್ತದ ಸಂಚಾರದ ತೊಂದರೆಯಿAದ ತೀವ್ರ ಅನಾರೋಗ್ಯಕ್ಕೀಡಾಗಿತ್ತು. ತಡಮಾಡದ ವೈದ್ಯರು, ಶಸ್ತçಚಿಕಿತ್ಸೆಗೆ ತೆಗೆದುಕೊಂಡರು.

ಸಾಮಾನ್ಯವಾಗಿ ಹೃದಯದಲ್ಲಿ ಮಹಾಪಧಮನಿಗಳ ಸಾಮಾನ್ಯ ಸಂಪರ್ಕಗಳಿರುತ್ತವೆ. ಅಂದರೆ ಮಹಾಪಧಮನಿಯು ಎಡಬದಿಯಿಂದ ಮತ್ತು ಶ್ವಾಸಕೋಶದ ಅಪಧಮನಿ ಬಲಬದಿಯಿಂದ ರಚಿಸಲ್ಪಡುತ್ತವೆ. ಆದರೆ ಶಿಶುವಿನ ದೊಡ್ಡ ಅಪಧಮನಿಗಳು ಅದಲುಬದಲಾಗಿ ಸಂಪರ್ಕ ಹೊಂದಿದ್ದು, ಆಮ್ಲಜನಕರಹಿತ ರಕ್ತವನ್ನು ಬಲಕ್ಕೆ ಹಿಂತಿರುಗಿಸುತ್ತದೆ, ಶ್ವಾಸಕೋಶದ ಅಪಧಮನಿ ಎಡಕ್ಕೆ ಇರುವದರಿಂದ ಶ್ವಾಸಕೋಶದಿಂದ ಹಿಂತಿರುಗುವ ಆಮ್ಲಜನಕಯುಕ್ತ ರಕ್ತವನ್ನು ಮರಳಿ ಶ್ವಾಸಕೋಶಕ್ಕೆ ತೆಗೆದುಕೊಂಡು ಹೋಗುತ್ತದೆ. ಆಮ್ಲಜನಕಯುಕ್ತ ಮತ್ತು ಆಮ್ಲಜನಕ ರಹಿತವನ್ನು ತಾತ್ಕಾಲಿಕವಾಗಿ ಮಿಶ್ರಣ ಮಾಡುವ ಸ್ಥಳವಿಲ್ಲದಿದ್ದರೆ ರಕ್ತ ಪರಿಚಲನೆಯಲ್ಲಿನ ಈ ವ್ಯವಸ್ಥೆಯು ಸಾವಿಗೆ ಕಾರಣವಾಗುತ್ತದೆ.
ಅತ್ಯಂತ ಅಪರೂಪವಾದ ಇದನ್ನು ಅಪಧಮನಿಯ ಸ್ವಿಚ್ ಆಪರೇಷನ್ ಮೂಲಕ ಸರಿಪಡಿಸಲಾಗುತ್ತದೆ. ಈ ವಿಧಾನವನ್ನು ಜನಿಸಿದ 3 ವಾರಗಳಲ್ಲಿ ಮಾಡಬೇಕಾಗುತ್ತದೆ. ದೊಡ್ಡ ಅಪಧಮನಿಗಳನ್ನು ಅವುಗಳ ಕೋಣೆಗೆ ಸಾಮಾನ್ಯ ಸಂಪರ್ಕಕ್ಕೆ ಬದಲಾಯಿಸಲಾಗುತ್ತದೆ. ನವಜಾತ ಶಿಶುಗಳ ಹೃದಯ ಶಸ್ತ್ರಚಿಕಿತ್ಸೆಯಲ್ಲಿ ಇದು ಅತ್ಯಂತ ಮುಖ್ಯವಾಗಿದ್ದು, ತಾಂತ್ರಿಕವಾಗಿ ಬೇಡಿಕೆಯಿರುವ ಸಂಕೀರ್ಣ ಶಸ್ತ್ರಚಿಕಿತ್ಸೆಯಾಗಿದೆ. ಆಸ್ಟೆçÃಲಿಯದ ಸಿಡ್ನಿಯಲ್ಲಿ ತರಬೇತಿ ಪಡೆದ ಚಿಕ್ಕಮಕ್ಕಳ ಹೃದಯ ಶಸ್ತçಚಿಕಿತ್ಸಕರಾದ ಡಾ. ಗಣಂಜಯ್ ಸಾಳ್ವೆ ಅವರು ಯಶಸ್ವಿ ಶಸ್ತçಚಿಕಿತ್ಸೆ ನೇರವೇರಿಸುವಲ್ಲಿ ಡಾ. ಆನಂದ ವಾಘರಾಳಿ ಮತ್ತು ಡಾ. ಶರಣಗೌಡ ಪಾಟೀಲ ಅವರು ಅರಿವಳಿಕೆ ನೀಡಿದರೆ, ಚಿಕ್ಕಮಕ್ಕಳ ಇಂಟೆನ್ಸಿವಿಸ್ಟ್ ಡಾ. ನಿಧಿ ಗೋಯೆಲ್ ಮಾನ್ವಿ, ಚಿಕ್ಕಮಕ್ಕಳ ಹೃದ್ರೋಗ ತಜ್ಞರಾದ ಡಾ. ವೀರೇಶ್ ಮಾನ್ವಿ ಮತ್ತು ಡಾ. ಡ್ಯಾನಿಶ್ ಮೆಮನ್ ಅವರು ಸಹಕರಿಸಿದರು.

ಶಸ್ತ್ರಚಿಕಿತ್ಸೆಯ ನಂತರ 10 ನೇ ದಿನಕ್ಕೆ ಮಗುವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಯಶಸ್ವಿ ಶಸ್ತçಚಿಕಿತ್ಸೆ ನೆರವೇರಿಸಿದ ಡಾ. ಗನಂಜಯ್ ಸಾಳ್ವೆ ಮತ್ತು ಅವರ ಸಿಬ್ಬಂದಿ ತಂಡಕ್ಕೆ ತಮ್ಮ ಮಗುವಿನ ಕುಟುಂಬಸ್ಥರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಹೃದ್ರೋಗದಿಂದ ಬಳಲುತ್ತಿರುವ ನವಜಾತ ಮಕ್ಕಳನ್ನು ನಿಭಾಯಿಸಲು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರವು ವಿಶ್ವ ದರ್ಜೆಯ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿದೆ ಎಂದು ಮುಖ್ಯ ಹೃದಯಶಸ್ತ್ರಚಿಕಿತ್ಸಕ ಡಾ. ರಿಚರ್ಡ್ ಸಲ್ಡಾನ್ಹಾ ವಿಭಾಗ ಮುಖ್ಯಸ್ಥರಾದ ಡಾ. ಮೋಹನ್ ಗಾನ ಅವರು ಹೇಳಿದ್ದಾರೆ.

ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿ ಮಗುವಿಗೆ ಹೊಸ ಜೀವನವನ್ನು ನೀಡಿದ ವೈದ್ಯರ ತಂಡವನ್ನು ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. (ಕರ್ನಲ್) ಎಂ. ದಯಾನಂದ ಅವರು ಅಭಿನಂದಿಸಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button