Kannada NewsKarnataka NewsNational

*ಆರು ಕೆಎಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ *

ಪ್ರಗತಿವಾಹಿನಿ ಸುದ್ದಿ: ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಠಿಯಿಂದ ರಾಜ್ಯ ಸರ್ಕಾರ 6 ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.‌

ಈ ಕುರಿತು ಸರ್ಕಾರದ ಅಧೀನ ಕಾರ್ಯದರ್ಶಿ ಉಮಾದೇವಿ ಅವರು ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ 6 ಕೆಎಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಆದೇಶಿಸಿದೆ.

ವಿಶ್ವನಾಥ ಪಿ. ಹಿರೇಮಠ (ಸ್ಥಳ ನಿರೀಕ್ಷಣೆ) –ಮುಖ್ಯ ಆಡಳಿತಾಧಿಕಾರಿ, ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ,

ಆರತಿ ಆನಂದ್ (ಸ್ಥಳ ನಿರೀಕ್ಷಣೆ) – ಮುಖ್ಯ ಆಡಳಿತಾಧಿಕಾರಿ, ಚಿಕ್ಕಳ್ಳಾಪುರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ,

ಸಯಿದಾ ಆಯಿಷಾ ( ಸ್ಥಳ ನಿರೀಕ್ಷಣೆ) – ‘ಮುಖ್ಯ ಆಡಳಿತಾಧಿಕಾರಿ, ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ.

ಸೀಮಾ ನಾಯ್ಕ್. ಬಿ – ವಿಶೇಷ ಜಿಲ್ಲಾಧಿಕಾರಿ( ಭೂಸ್ವಾಧೀನ) ಹುಬ್ಬಳ್ಳಿ-ಅಂಕೋಲ ರೈಲ್ವೆ ಬ್ರಾಡ್ ಗೇಸ್ ಯೋಜನೆ, ಕಾರವಾರ ಹುದ್ದೆಗೆ

ಆದ ಫಾತಿಮಾ-  ಪ್ರಧಾನ ವ್ಯವಸ್ಥಾಪಕರು , ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಬೆಂಗಳೂರು ಹುದ್ದೆಗೆ.

ಡಾ.ಶರಣಪ್ಪ. ಬಿ – ಸಹಾಯಕ ಆಯುಕ್ತರು (ಚುನಾವಣೆ) ಬಿಬಿಎಂಪಿ ಬೆಂಗಳೂರು ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.‌

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button