Kannada NewsKarnataka NewsLatest

ಲಾಠಿ ಹಿಡಿದ ಕೇಂದ್ರ ಸಚಿವ ಸುರೇಶ ಅಂಗಡಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –ಕೇಂದ್ರ ರೈಲ್ವೆ ಸಚಿವ ಸುರೇಶ ಅಂಗಡಿ ಇಂದು ಲಾಠಿ ಹಿಡಿದು ಬೆಳಗಾವಿ ನಗರ ಪ್ರದಕ್ಷಿಣೆ ಹಾಕಿದರು. ಅವರೊಂದಿಗೆ ಇನ್ನೂ ಸಾವಿರಾರು ಜನರು ಲಾಠಿ ಹಿಡಿದು ಹಿಂಬಾಲಿಸಿದರು.

ವಿಜಯ ದಶಮಿ ಅಂಗವಾಗಿ ಬೆಳಗಾವಿ ನಗರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥಃ ಸಂಚಲನದಲ್ಲಿ ಪಾಲ್ಗೊಂಡ ಸುರೇಶ ಅಂಗಡಿ ಶಿಸ್ತಿನ ಸ್ವಯಂ ಸೇವಕನಾಗಿ ಸ್ವಯಂ ಸೇವಕನಾಗಿ ಕಾಣಿಸಿಕೊಂಡರು. ಖಾಕಿ ಪ್ಯಾಂಟ್, ಬಿಳೆ ಶರ್ಟ್ ಧರಿಸಿ ನಗರದ ಬೀದಿ ಬೀದಿಗಳಲ್ಲಿ ಪಥ ಸಂಚಲನ ಮಾಡಲಾಯಿತು.

ಸುರೇಶ ಅಂಗಡಿ ಪ್ರತಿ ವರ್ಷವೂ ವಿಜಯ ದಶಮಿ ದಿನ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥಃ ಸಂಚಲನದಲ್ಲಿ ಪಾಲ್ಗೊಳ್ಳುತ್ತಾರೆ.

ಹಲವಾರು ಬಿಜೆಪಿ ಪ್ರಮುಖರೂ ಸೇರಿದಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಾವಿರಾರು ಜನ ಇದರಲ್ಲಿ ಪಾಲ್ಗೊಂಡಿದ್ದರು. ನಂತರ ನಗರದ ಗಾಂಧಿ ಭವನದಲ್ಲಿ ಸಮಾವೇಶ ನಡೆಯಿತು.

ಜನರ ಅಹವಾಲಿ ಆಲಿಕೆ

ಇದಕ್ಕೂ ಮೊದಲು ಸುರೇಶ ಅಂಗಡಿ ತಮ್ಮ ಗೃಹ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲಿ ಆಲಿಸಿದರು. ವಿವಿಧೆಡೆಯಿಂದ ಬಂದ ನೂರಾರು ಜನರು ಅಂಗಡಿಯವರನ್ನು ಭೇಟಿ ಮಾಡಿ ಸಮಸ್ಯೆ ಹೇಳಿಕೊಂಡರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button