Kannada NewsKarnataka News

ಮೈಸೂರು -ಹುಬ್ಬಳ್ಳಿ ಟ್ರೇನ್ ಬೆಳಗಾವಿವರೆಗೂ ವಿಸ್ತರಣೆ, ವಿಜಯಪುರಕ್ಕೆ ಹೊಸ ಟ್ರೇನ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಹಲವು ರೈಲುಗಳ ವಿಸ್ತರಣೆ ಹಾಗೂ ಹೆಚ್ಚುವರಿ ನಿಲುಗಡೆ ಘೋಷಿಸಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಆದೇಶಿಸಿದ್ದಾರೆ.

ಮೈಸೂರು -ಹುಬ್ಬಳ್ಳಿ ಮಧ್ಯೆ ಓಡುತ್ತಿರುವ ವಿಶ್ವಮಾನವ ಎಕ್ಸಪ್ರೆಸ್ ರೈಲನ್ನು ಬೆಳಗಾವಿವರೆಗೂ ವಿಸ್ತರಿಸಲು ನಿರ್ಧರಿಸಲಾಗಿದೆ. ಬೆಳಗಾವಿ ಜನರ ಬಹುಕಾಲದ ಈ ಬೇಡಿಕೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಶೀಘ್ರವೇ ಹಸಿರುನಿಶಾನೆ ತೋರಲಿದ್ದಾರೆ.

ಹರಿಹರ -ಕೊಟ್ಟೂರು ರೈಲನ್ನು ಹೊಸಪೇಟೆವರೆಗೂ ವಿಸ್ತರಿಸಲು ನಿರ್ಧರಿಸಲಾಗಿದ್ದು, ಅ.17ರಂದು ಸಚಿವರು ಹಸಿರುನಿಶಾನೆ ತೋರಲಿದ್ದಾರೆ. ಯಶವಂತಪುರ -ವಿಜಯಪುರ ರೈಲು ಆರಂಭಿಸಲು ನಿರ್ಧರಿಸಲಾಗಿದ್ದು, ಕೊಟ್ಟೂರು-ಹೊಸಪೇಟೆ ಮಾರ್ಗದಲ್ಲಿ ಓಡಲಿದೆ.

ಹುಬ್ಬಳ್ಳಿ -ಲೋಕಮಾನ್ಯ ತಿಲಕ್ ಎಕ್ಸಪ್ರೆಸ್ ರೈಲಿಗೆ ರೈಯಬಾಗದಲ್ಲಿ ನಿಲುಗಡೆ ನೀಡಿ ಆದೇಶಹೊರಡಿಸಲಾಗಿದೆ.

Home add -Advt

ಸುರೇಶ ಅಂಗಡಿಯಿಂದ ಬೆಳಗಾವಿಗೆ ಮತ್ತೊಂದು ಕೊಡುಗೆ

ಬಜೆಟ್ ಗೆ ಮುನ್ನವೇ ಬೆಳಗಾವಿಗೆ ಸುರೇಶ ಅಂಗಡಿ ಭರ್ಜರಿ ಘೋಷಣೆ

ಲಾಠಿ ಹಿಡಿದ ಕೇಂದ್ರ ಸಚಿವ ಸುರೇಶ ಅಂಗಡಿ

Related Articles

Back to top button