Kannada NewsKarnataka NewsLatest

9ರಂದು ಬೆಳಗಾವಿಗೆ ಸಿಎಂ, ಕಾರ್ಮಿಕ ಕುಟುಂಬಕ್ಕೆ ಪರಿಹಾರ ವಿತರಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನ.9ರಂದು ಬೆಳಗಾವಿಗೆ ಆಗಮಿಸಲಿದ್ದಾರೆ. ಅಪಘಾತ ಮತ್ತಿತರ ಕಾರಣದಿಂದ ಮೃತರಾಗಿರುವ ಕಾರ್ಮಿಕರಿಗೆ ಅಂದು ಪರಹಾರದ ಚೆಕ್ ವಿತರಿಸಲಿದ್ದಾರೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ ತಿಳಿಸಿದ್ದಾರೆ.

ಕಾರ್ಮಿಕರು ಅಪಘಾತದಲ್ಲಿ ಮೃತರಾದರೆ ಅವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ವಿತರಿಸಲಾಗುತ್ತದೆ. ಸಹಜ ಸಾವು ಸಂಭವಿಸಿದರೆ ಅಂತಹ ಕುಟುಂಬದವರಿಗೆ ಅಂತ್ಯಸಂಸ್ಕಾರ ವೆಚ್ಚ ಎಂದು 54 ಸಾವಿರ ರೂ. ನೀಡಲಾಗುತ್ತದೆ.

Home add -Advt

ಬೆಳಗಾವಿ ಜಿಲ್ಲೆಯಲ್ಲಿ ಅಪಘಾತದಲ್ಲಿ ಮೃತರಾಗಿರುವ 4 ಮತ್ತು ಸಹಜ ಸಾವು ಸಂಭವಿಸಿದ 2 ಕಾರ್ಮಿಕರ ಕುಟುಂಬಗಳಿಗೆ ಪರಿಹಾರ ವಿತರಿಸಲಾಗುತ್ತದೆ.

ಕಲ್ಲೋಳಿಯ ಹಣಮಂತ ಬಸಪ್ಪ ಹಟ್ಟಿಗೌಡ್ರ, ನಂದಗಾಂವ್ ನ ಮೋಹನ ಮಾರುತಿ ರಾಜಮಾನೆ ಮತ್ತು ನಾಮದೇವ ತುಕಾರಾಮ ಗಾವಡೆ, ಹಂದಿಗನೂರಿನ ವಿಷ್ಣು ಯಲ್ಲಪ್ಪ ಸುತಾರ ಅಪಘಾತದಲ್ಲಿ ಮೃತರಾಗಿದ್ದಾರೆ. ಗೋಕಾಕದ ಹಣಮಂತ ಯಲ್ಲಪ್ಪ ಪೂಜೇರಿ ಮತ್ತು ಕಮತನೂರಿನ ಬಸಗೌಡ ಗೌಡಪ್ಪ ಪಾಟೀಲ ಸಹಜ ಸಾವನ್ನಪ್ಪಿದ್ದಾರೆ.

ಇನ್ನೂ ಕೆಲವು ಪ್ರಕರಣಗಳು ಪರಿಶೀಲನೆಯಲ್ಲಿದ್ದು, ಶನಿವಾರದೊಳಗೆ ಕ್ಲಿಯರ್ ಆದರೆ ಅಂತಹ ಕುಟುಂಬಗಳಿಗೂ ಸಿಎಂ ಶನಿವಾರ ಪರಿಹಾರ ವಿತರಿಸುವರು.

Related Articles

Back to top button