Kannada NewsKarnataka NewsNational

*ತೋಟದ ಮನೆಯಲ್ಲಿ ವೃದ್ಧ ದಂಪತಿಯ ಭೀಕರ ಹತ್ಯೆ*

ಪ್ರಗತಿವಾಹಿನಿ ಸುದ್ದಿ : ತೋಟದ ಮನೆಯಲ್ಲಿ ವೃದ್ಧ ದಂಪತಿಯನ್ನು ಒರಳುಕಲ್ಲಿನಿಂದ ಜಜ್ಜಿ ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ನಾಡಪ್ಪನಹಳ್ಳಿಯಲ್ಲಿ ನಡೆದಿದೆ.

ರಂಗಸ್ವಾಮಿಗೌಡ (65) ಶಾಂತಮ್ಮ (55) ಕೊಲೆಯಾದ ದುರ್ದೈವಿಗಳು. ತೋಟದ ಮನೆಯಲ್ಲಿ ದಂಪತಿಗಳು ವಾಸವಿದ್ದರು. ಪರಿಚಿತರೇ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಕೊಲೆಗೆ ನಿಖರ ಕಾರಣ ಏನು ಎಂಬುವುದು ಇನ್ನೂ ತಿಳಿದುಬಂದಿಲ್ಲ. ಸ್ಥಳಕ್ಕೆ ಬಿಳಿಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Home add -Advt

ಮೃತ ದಂಪತಿಯ ಪುತ್ರ ದೇವರಾಜ್ ಎಂಬುವವರು ಜಮೀನಿನಲ್ಲಿ ಶುಂಠಿ ಕೀಳುತ್ತಿದ್ದರು. ಈ ವೇಳೆ ಕಾರ್ಮಿಕ ಗಣೇಶ ಎಂಬವವರನ್ನು ತೋಟದ ಮನೆಗೆ ತೆರಳಿ, ಶುಂಠಿ ತುಂಬಲು ಬುಟ್ಟಿ ತೆಗೆದುಕೊಂಡು ಬರುವಂತೆ ಸೂಚಿಸಿದ್ದ. ಮನೆಗೆ ಬಂದಾಗ ದಂಪತಿಗಳು ರಕ್ತದ ಮಡುವಿನಲ್ಲಿ ಬಿದ್ದದ್ದನ್ನು ಗಣೇಶ ಕಂಡು ಶಾಕ್ ಆಗಿದ್ದಾರೆ.

Related Articles

Back to top button