Kannada NewsKarnataka News
ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳಿಗೆ ಚಾಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –ಸುಮಾರು 29 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಅಭಯ ಪಾಟೀಲ ಚಾಲನೆ ನೀಡಿದರು.
ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಬರುವ ಮಹಾತ್ಮಾ ಗಾಂಧಿ ಕಾಲನಿ, ಮರಾಠ ಕಾಲನಿ, ಶಾಂತಿ ಕಾಲನಿ, ಕರಿಯಪ್ಪ ಕಾಲನಿ, ಕಪಿಲೇಶ್ವರ ಕಾಲನಿ, ಸ್ವಾಮಿ ವಿವೇಕಾನಂದ ಕಾಲನಿಗಳಲ್ಲಿ ಕಾಂಕ್ರೀಟ್ ರೋಡ್, ಕೆಲವು ಕಡೆಗಳಲ್ಲಿ ಪೇವರ್ಸ ಅಳವಡಿಕೆ, ಯುಜೆಡಿ, ಅಳವಡಿಕೆ, ಕೆಲವು ಕಾಲನಿಗಳಲ್ಲಿ ಯುಜಿ ಕೇಬಲ್, ಲೈಟ್ ಅಳವಡಿಕೆ ಹಾಗೂ ಅನಗೋಳ ನಾಕಾದಿಂದ ಧರ್ಮವೀರ ಸಂಭಾಜೀ ವೃತದವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ದೊರಕಿತು.




