
ಪ್ರಗತಿವಾಹಿನಿ ಸುದ್ದಿ: ಸಚಿವ ಮಂಕಾಳು ವೈದ್ಯ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಹಾಕಿದ ಪ್ರಕರಣ ಸಂಬಂಧ ಇಬ್ಬರನ್ನು ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಪೊಲೀಸರು ಬಂಧಿಸಿದ್ದಾರೆ.
ಬೈಲೂರು ದೊಡ್ಡಬಲಸೆ ನಿವಾಸಿ ನಾಗರಾಜ್ ಮಾದೇವ ನಾಯ್ಕ್ (35), ಬೈಲೂರು ಸಣ್ಣ ಬಲಸೆಯ ಭಾಸ್ಕರ ನಾರಾಯಣ ದೇವಾಡಿ (30) ಬಂಧಿತ ಆರೋಪಿಗಳು.
ಸಚಿವ ಮಂಕಾಳು ವೈದ್ಯ ವಿರುದ್ಧ ಅವಹೇಳನಕಾರಿ ಹಾಗೂ ಸುಳ್ಳಿನಿಂದ ಕೂಡಿದ ಪೋಸ್ಟ್ ಗಳನ್ನು ಹಾಕಿದ್ದಾಗಿ ಭಟ್ಕಳ ಬೆರ್ನಮಕ್ಕಿ ನಿವಾಸಿ ಕಾಂಗ್ರೆಸ್ ಕಾರ್ಯಕರ್ತ ನಾಗಪ್ಪ ಸುಬ್ರಾಯ್ ನಾಯ್ಕ್ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.