Kannada NewsLatest
ಕರವೇ ಆಟೋ ಘಟಕದ ಉದ್ಘಾಟನೆ

ಪ್ರಗತಿ ವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ (ಪ್ರವೀಣ್ ಶೆಟ್ಟಿ ಬಣ) ಆಟೊ ಘಟಕ ಉದ್ಘಾಟನೆಗೊಂಡಿತು.
ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಆರ್. ಅಭಿಲಾಷ್, ಕನ್ನಡ ನಾಡು, ನುಡಿ, ನೆಲ, ಜಲದ ರಕ್ಷಣೆಗೆ ಆಟೊ ಚಾಲಕರು ಸದಾ ಮುಂದಿರುತ್ತಾರೆ. ವಯಸ್ಸಿನ ಅಂತರವಿಲ್ಲದೆ ಆಟೊ ಚಾಲಕರು ಕನ್ನಡ ಪ್ರೇಮ ಮೆರೆಯುತ್ತಾರೆ. ಆಟೊ ಚಾಲಕರ ಕನ್ನಡಾಭಿಮಾನ ಪ್ರತಿ ದಿನವೂ ಒಂದಿಲ್ಲೊಂದು ಘಟನೆಯ ಮೂಲಕ ನಿದರ್ಶನಕ್ಕೆ ಬರುತ್ತಲೇ ಇರುತ್ತದೆ ಎಂದು ಅಭಿಮಾನ ವ್ಯಕ್ತಪಡಿಸಿದರು.
ಎಲ್ಲ ಕನ್ನಡಿಗರೂ ಕನ್ನಡದ ಕೆಲಸಗಳಿಗೆ ಕೈ ಜೋಡಿಸಬೇಕು ಎಂದು ವಿನಂತಿಸಿದರು. ಈ ಸಂದರ್ಭದಲ್ಲಿ ಆಟೊ ಘಟಕದ ಅಧ್ಯಕ್ಷ ಇರ್ಫಾನ್, ಉಪಾಧ್ಯಕ್ಷ ಮಹಾಂತೇಶ್ ಮತ್ತಿತರರು ಉಪಸ್ಥಿತರಿದ್ದರು.
ಬೆಳಗಾವಿಯಲ್ಲಿ 130 ಕೋಟಿ ವೆಚ್ಚದಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆ




