
ಪ್ರಗತಿವಾಹಿನಿ ಸುದ್ದಿ: ವಾಹನವೊಂದು ನದಿಗೆ ಉರುಳಿಬಿದ್ದ ಪರಿಣಾಮ ನವದಂಪತಿ ಸೇರಿ 9 ಜನರು ನಾಪತ್ತೆಯಾಗಿರುವ ಘಟನೆ ಸಿಕ್ಕಿಂನಲ್ಲಿ ನಡೆದಿದೆ.
ತೀಸ್ತಾ ನದಿಗೆ ವಾಹನ ಉರುಳಿ ಬಿದ್ದಿದೆ. ಪರಿಣಾಮ ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯ ನವವಿವಾಹಿತ ದಂಪತಿ ಸೇರಿ 9 ಜನರು ಕಣ್ಮರೆಯಾಗಿದ್ದಾರೆ.
ಸಿಕ್ಕಿನಲ್ಲಿ ಭಾರಿ ಮಳೆಯಾಗುತ್ತಿದ್ದು, ವಾಹನ ನಿಯಂತ್ರಣ ತಪ್ಪಿ ನದಿಗೆ ಉರುಳಿದೆ. ನದಿಗೆ ಬಿದ್ದವರಿಗಾಗಿ ಶೋಧಕಾರ್ಯ ಮುಂದುವರೆದಿದೆ.