Belagavi NewsBelgaum NewsKarnataka News

*ಘಟಪ್ರಭಾ ಅಬ್ಬರ: ಮುಳುಗಿರುವ ಸೇತುವೆ ಮೇಲೆ ಜೀವದ ಹಂಗು ತೊರೆದು ಓಡಾಡುತ್ತಿರುವ ಜನರು*

ಪ್ರಗತಿವಾಹಿನಿ ಸುದ್ದಿ: ಪಶ್ಚಿಮ ಘಟ್ಟ, ಮಹಾರಾಷ್ಟ್ರದ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ಬೆಳಗಾವಿಯಲ್ಲಿ ಸಪ್ತ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಜಿಲ್ಲೆಯಲ್ಲಿ ಪ್ರವಾಹ ಭೀತಿ ಎದುರಾಗಿದೆ.

ಜಿಲ್ಲೆಯ ಬಹುತೇಕ ಸೇತುವೆಗಳು ಮುಳುಗಡೆಯಾಗಿವೆ. ಘಟಪ್ರಭಾ ನದಿ ಅಬ್ಬರಕ್ಕೆ ಕಮಲದಿನ್ನಿ ಸೇತುವೆ ಮುಳುಗಡೆಯಾಗಿದ್ದು, ಸೇತುವೆಯ ಮೇಲೆ ಒಂದೂವರೆ ಅಡಿಗಳಷ್ಟು ರಭಸವಾಗಿ ನೀರು ಹರಿಯುತ್ತಿದೆ.

ಜಲಾವೃತಗೊಂಡಿರುವ ಸೇತುವೆಯ ಮೇಲೆಯೇ ಜನರು ಜೀವದ ಹಂಗು ತೊರೆದು ಓಡಾಡಬೇಕಾದ ಸ್ಥಿತಿ ಎದುರಾಗಿದೆ. ಮೂಡಲಗಿ, ಗೋಕಾಕ್ ಭಾಗದಲ್ಲಿ ಘಟಪ್ರಭಾ ನದಿ ಅಬ್ಬರಿಸಿ ಹರಿಯುತ್ತಿದ್ದು, ಕೃಷಿ ಭೂಮಿ, ಗ್ರಾಮಗಳು ಜಲಾವೃತಗೊಂಡಿವೆ.

Home add -Advt


Related Articles

Back to top button