
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಹಿರಿಯ ಪತ್ರಿಕಾ ಛಾಯಾಗ್ರಾಹಕ ಅರುಣ ಯಳ್ಳೂರಕರ ಅವರು, ‘ಕರ್ನಾಟಕ ಛಾಯಾರತ್ನ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಪತ್ರಿಕಾ ಛಾಯಾಗ್ರಹಕರಾಗಿ ಪತ್ರಿಕೆ ಮಾದ್ಯಮ ಕ್ಷೇತ್ರದಲ್ಲಿ ಹಲವು ದಶಕಗಳಲ್ಲಿ ಸಲ್ಲಿಸಿರುವ ಅಭೂತಪೂರ್ವ ಸೇವೆಯನ್ನು ಪರಿಗಣಿಸಿ, ಕರ್ನಾಟಕ ವಿಡಿಯೊ ಮತ್ತು ಫೊಟೊ ಅಸೋಸಿಯೇಷನ್ ಬ(ರಿ) ಮತ್ತು ಬೈಸೇಲ್ ಇಂಟ್ರಾಕ್ಷನ್ ಪ್ರವೇಟ್ ಲಿಮಿಟೆಡ್ ಸಹಯೊಗದೊಂದಿಗೆ ಜೂನ್ 27 ರಂದು ಬೆಂಗಳೂರಿನ ಅರಮನೆ ಮೈದಾನದ ತ್ರೀಪುರ ವಾಸಿನಿಯಲ್ಲಿ ಆಯೊಜಿಸಿದ ಕಾರ್ಯಕ್ರಮದಲ್ಲಿ ಅರುಣ ಯಳ್ಳೂರಕರಗೆ ಕರ್ನಾಟಕ ಛಾಯಾ ರತ್ನ ಪ್ರಸಸ್ತಿ ನಿಡಿ ಗೌರವಿಸಲಾಯಿತು.
ಕಾರ್ಮಿಕ ಸಚಿವ ಸಂತೋಷ ಲಾಡ್ , ಶಾಸಕ ಪ್ರಸಾದ ಅಬ್ಬಯ್ಯ, ಹುಬ್ಬಳ್ಳಿ ಪೊಟೊ ವಿಡಿಯೊ ಅಸೋಸಿಯೇಷನ್ ಅದ್ಯಕ್ಷ ಕಿರಣ ಬಾಕಳೆ ಇದ್ದರು.