Kannada NewsNational

*ಗಂಡನನ್ನು ಕೊಂದು ಮಾವನ ಜೊತೆ ಓಡಿಹೋದ ನವ ವಿವಾಹಿತೆ*

ಪ್ರಗತಿವಾಹಿನಿ ಸುದ್ದಿ: ತನ್ನ ತಂದೆಯ ಅಕ್ಕನ ಗಂಡ ಅಂದರೆ ಮಾವನ ಜತೆ ಅಕ್ರಮ ಸಂಬಂಧ ಹೊಂದಿದ ನವ ವಿವಾಹಿತೆ, ಮದುವೆಯ ನಂತರ ಪತಿ ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆ ಎಂದು ಕೇಲವೆ ತಿಂಗಳಲ್ಲಿ ಗಂಡನನ್ನು ಕೊಂದು ಮಾವನ ಜತೆ ಓಡಿ ಹೋಗಿರುವ ಘಟನೆ ಔರಂಗಾಬಾದ್​ನಲ್ಲಿ ನಡೆದಿದೆ.

ಔರಂಗಾಬಾದ್ ಪೊಲೀಸರು ಈ ಪ್ರಕರಣವನ್ನು ಭೇದಿಸಿದ್ದು, ಮೃತ ಪ್ರಿಯಾಂಶು ಎಂಬಾತನ ಪತ್ನಿ ಗುಂಜಾ ಸಿಂಗ್ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. 

ಜೂನ್ 24ರ ರಾತ್ರಿ ನಬಿನಗರ ಪೊಲೀಸ್ ಠಾಣೆ ಪ್ರದೇಶದ ಲೆಂಬೋಕಾಪ್ ಪ್ರಿಯಾಂಶುವನ್ನು ಗುಂಡಿಕ್ಕಿ ಕೊಂದಿರುವ  ಘಟನೆ ನಡೆದಿತ್ತು. 

ಈ ಕೊಲೆಗೆ ಸೂತ್ರಧಾರಿ ಪ್ರಿಯಾಂಶು ಅವರ ಪತ್ನಿ ಗುಂಜಾ ಸಿಂಗ್ ಗೆ ತನ್ನ ತಂದೆಯ ಅಕ್ಕನ ಗಂಡ ಅಂದರೆ ಮಾವ ಜೀವನ್​ಸಿಂಗ್ ಜತೆ ಅಕ್ರಮ ಸಂಬಂಧವಿತ್ತು. ಮದುವೆಯ ನಂತರ ಪ್ರಿಯಾಂಶು ಅವರ ಸಂಬಂಧಕ್ಕೆ ಅಡ್ಡಿಯಾಗಿದ್ದ, ಹೀಗಾಗಿ ಇಬ್ಬರೂ ಶೂಟರ್​ಗಳನ್ನು ನೇಮಿಸಿಕೊಂಡು ಕೊಲ್ಲಲು ಸಂಚು ರೂಪಿಸಿದ್ದರು

Home add -Advt

ಜೂನ್ 24ರಂದು ಪ್ರಿಯಾಂಶು ರಾತ್ರಿ ಗ್ರಾಮವಾದ ಬರ್ವಾನ್​​ಗೆ ಬೈಕ್​ನಲ್ಲಿ ಹಿಂದಿರುಗುತ್ತಿದ್ದಾಗ, ಗುಂಡು ಹಾರಿಸಲಾಗಿದೆ. ಪೊಲೀಸರು ತಕ್ಷಣ ಕ್ರಮ ಕೈಗೊಂಡು ವಿಶೇಷ ತನಿಖಾ ತಂಡ ರಚಿಸಿದರು. ಈ ತಂಡ ಗುಂಜಾ ಸಿಂಗ್, ಜೈಶಂಕರ್ ಮತ್ತು ಮುಖೇಶ್ ಶರ್ಮಾ ಅವರನ್ನು ಬಂಧಿಸಿದೆ.

ವಿಚಾರಣೆ ಸಮಯದಲ್ಲಿ ತನ್ನ ಗಂಡನ ಕೊಲೆಯಲ್ಲಿ ತನ್ನ ಕೈವಾಡವಿದೆ ಎಂದು ಗುಂಜಾ ಒಪ್ಪಿಕೊಂಡಿದ್ದಾಳೆ. ಪೊಲೀಸರು ಜೀವನ್ ಸಿಂಗ್​​ನನ್ನು ಕೂಡ ಬಂಧಿಸಿದ್ದಾರೆ. 

Related Articles

Back to top button