Kannada NewsKarnataka NewsLatest
*ಹಬ್ಬದ ದಿನವೇ ದುಡುಕಿನ ನಿರ್ಧಾರ: ಜಿ.ಟಿ.ಮಾಲ್ ನಿಂದ ಜಿಗಿದು ಯುವಕ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ: ಬೆಳಕಿನ ಹಬ್ಬ ದೀಪಾವಳಿ ದಿನದಂದೇ ಯುವಕನೊಬ್ಬ ದುಡುಕಿನ ನಿರ್ಧಾರ ಕೈಗೊಂಡು ಜೀವವನ್ನೇ ಅಂತ್ಯಗೊಳಿಸಿಕೊಂಡಿದ್ದಾನೆ. ಬೆಂಗಳೂರಿನ ಜಿ.ಟಿ.ಮಾಲ್ ಒಳಗೆ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಇಂದು ಬೆಳಿಗ್ಗೆ ಜಿ.ಟಿ.ಮಾಲ್ ಓಪನ್ ಮಾಡುತ್ತಿದ್ದಂತೆಯೇ ಮಾಲ್ ಗೆ ಆಗಮಿಸಿದ್ದ ಯುವಕ ಮೂರನೇ ಫ್ಲೋರ್ ಗೆ ಹೋಗಿದ್ದಾನೆ. ಸಹಜವಾಗಿ ನಡೆದು ಮೂರನೇ ಫ್ಲೋರ್ ಗೆ ಹೋದ ಯುವಕ ಏಕಾಏಕಿ ಮೂರನೇ ಫ್ಲೋರ್ ನಿಂದ ಕೆಳಗೆ ಹಾರಿದ್ದಾನೆ. ನೆಲಕ್ಕೆ ಅಪ್ಪಳಿಸಿದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮಾಗಡಿ ರಸ್ತೆಯಲ್ಲಿರುವ ಜಿ.ಟಿ.ಮಾಲ್ ನಲ್ಲಿ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಸದ್ಯ ಮಾಲ್ ಬಾಗಿಲು ಬಂದ್ ಮಾಡಿದ್ದು, ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಿದ್ದಾರೆ. ಯುವಕ ಯಾರು? ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು? ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.