Belagavi NewsBelgaum NewsKarnataka NewsLatest

*ತಂದೆ ಜೊತೆ ಕುರಿ ಕಾಯುವ ವೇಳೆ ದುರ್ಘಟನೆ: ಇಬ್ಬರು ಬಾಲಕರು ನೀರುಪಾಲು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ತಂದೆಯ ಜೊತೆ ಕುರಿ ಕಾಯುವ ವೇಳೆ ಕಾಲುವೆಗೆ ಇಳಿದಿದ್ದ ಇಬ್ಬರು ಬಾಲಕರು ನೀರುಪಾಲಾದ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಪದಮಂಡಿ ಗ್ರಾಮದಲ್ಲಿ ನಡೆದಿದೆ. ಹಣಮಂತ ದುರ್ಗಪ್ಪ ಹಗೇದ (10) ಬಸವರಾಜ ರಮೇಶ ಸೋಮಣ್ಣವರ (10) ಮೃತಪಟ್ಟ ಬಾಲಕರು.

Home add -Advt

ತಂದೆ ಹಣಮಂತ ಜೊತೆ ಕುರಿ ಕಾಯಲು ಹೋಗಿದ್ದ ಮಕ್ಕಳು ಹಾಗೂ ಗೆಳೆಯ ಬಸವರಾಜ ಕಾಲುವೆಗೆ ಈಜಲು ತೆರಳಿದ್ದರು. ಮಕ್ಕಳು ಎಲ್ಲಿ ಎಂದು ನೋಡಿದ ಸಂದರ್ಭದಲ್ಲಿ ಕಾಲುವೆ ಬಳಿ ಬಾಲಕರ ಬಟ್ಟೆ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಇಬ್ಬರು ಬಾಲಕರ ಮೃತದೇಹ ಪತ್ತೆಯಾಗಿದೆ. ಕಟಕೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related Articles

Back to top button