Belagavi NewsBelgaum NewsCrimeKannada NewsKarnataka News

*ತಂಗಿಯ ಜೊತೆ ಮಾತನಾಡಿದ್ದಕ್ಕೆ ಯುವಕನ ಕೊಲೆ ಮಾಡಿದ ಅಪ್ರಾಪ್ತ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತನ್ನ ತಂಗಿಯ ಜೊತೆ ಮಾತನಾಡಿದ ಎಂಬ ಕಾರಣಕ್ಕೆ ಅಪ್ರಾಪ್ತ ಬಾಲಕ ಯುವಕನ ಕೊಲೆ ಮಾಡಿರುವ ಘಟನೆ ನಡೆದಿದೆ. 

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ರಾಜಾಪೂರ ಗ್ರಾಮದಲ್ಲಿ ಈ ಘಟನೆ ನಡೆದಿದೆ.‌ ಮಂಜುನಾಥ ಸುಭಾಸ ಎಣ್ಣೆ  (23) ಮೃತ ಯುವಕ. ಅಪ್ರಾಪ್ತ ಬಾಲಕನ ತಂಗಿಯ ಜೊತೆ ಮಾತನಾಡಿದ ಎಂಬ ಕಾರಣಕ್ಕೆ ಇಂದು ಸಂಜೆ ರಾಜಾಪೂರ ಗ್ರಾಮದ ವಿಠೋಭಾ ವಿಶ್ವಭಾ ದೇವಸ್ಥಾನದ ಬಳಿ  ಕಬ್ಬಿಣದ ರಾಡನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ.

ಈ ಬಗ್ಗೆ ಘಟಪ್ರಭಾ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 28/2026 ಕಲಂ 103(1) ಬಿಎನ್‌ಎಸ್ 2023 ಅಡಿ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಾಲಾದೆ.

Home add -Advt

Related Articles

Back to top button