
ಪ್ರಗತಿವಾಹಿನಿ ಸುದ್ದಿ: 2023ರ ಗ್ರೆನೇಡ್ ಪತ್ತೆ ಕೇಸ್ ನ ಮೋಸ್ಟ್ ವಾಂಟೆಡ್ ಉಗ್ರ ಅರ್ಷದ್ ಖಾನ್ ನನ್ನು ಎನ್ ಐಎ ಅಧಿಕಾರಿಗಳು ಬಂಧಿಸಿದ್ದಾರೆ.
ಜಾಮೀನಿನ ಮೇಲೆ ಹೊರ ಬಂದಿದ್ದ ಅರ್ಷದ್ ಖಾನ್ ನನ್ನು ಬೆಂಗಳೂರಿನ ಆರ್.ಟಿ.ನಗರ ವ್ಯಾಪ್ತಿಯಲ್ಲಿ ಎನ್ ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಈ ಹಿಂದೆ ಜಾಅಮೀನು ಪಡೆದು ಹೊರ ಬಂದ ಬಳಿಕ ಅರ್ಷದ್ ಖಾನ್ ಮತ್ತೆ ಕೋರ್ಟ್ ಗೆ ಹಾಜರಾಗಿರಲಿಲ್ಲ.
ಶಂಕಿತ ಉಗ್ರನ ವಿರುದ್ಧ ಪ್ರೋಕ್ಲೋಮೇಷನ್ ಜಾರಿಯಾಗಿತ್ತು. ಈತ ಕುಕ್ಕರ್ ಬಾಂಬ್ ಸ್ಫೋಟದ ರೂವಾರಿ ಜುನೈದ್ ಅಹ್ಮದ್ ನ ಸ್ನೇಹಿತ. ಜುನೈದ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದ್ದು, ಆತನ ಸುಳಿವು ನೀಡಿದವರಿಗೆ ಎನ್ ಐಎ 5 ಲಕ್ಷ ಬಹುಮಾನವನ್ನು ಘೋಷಿಸಿದೆ.




